alex Certify ರಾತ್ರಿಯಾದ್ರೂ ಮನೆಗೆ ಬಾರದ ಮಕ್ಕಳು, ಹುಡುಕಾಡಿದ ಪೋಷಕರಿಗೆ ಬಿಗ್ ಶಾಕ್: ಈಜಲು ಹೋಗಿ ಮೂವರು ಬಾಲಕರು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿಯಾದ್ರೂ ಮನೆಗೆ ಬಾರದ ಮಕ್ಕಳು, ಹುಡುಕಾಡಿದ ಪೋಷಕರಿಗೆ ಬಿಗ್ ಶಾಕ್: ಈಜಲು ಹೋಗಿ ಮೂವರು ಬಾಲಕರು ಸಾವು

ದಾವಣಗೆರೆ: ಈಜಲು ಹೋಗಿದ್ದ ಮೂವರು ಬಾಲಕರು ಮೃತಪಟ್ಟ ಘಟನೆ ಜಗಳೂರು ಕೆರೆಯಲ್ಲಿ ನಡೆದಿದೆ. ಆಶಿಕ್(10), ಆಫ್ರನ್(8) ಹಾಗೂ ಸೈಯದ್ ಫೈಜಾನ್(9) ಮೃತಪಟ್ಟ ಬಾಲಕರು ಎಂದು ಹೇಳಲಾಗಿದೆ.

ಆಶಿಕ್ ಮತ್ತು ಅಫ್ರನ್ ಸಹೋದರರಾಗಿದ್ದು ಸೈಯದ್ ಫೈಜಾನ್ ಜೊತೆಗೆ ಸೇರಿ ಮೂವರೂ ಕೆರೆಗೆ ಈಜಲು ಹೋಗಿದ್ದ ವೇಳೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ರಾತ್ರಿಯಾದರೂ ಮಕ್ಕಳು ಮನೆಗೆ ಬಾರದ ಕಾರಣ ಪೋಷಕರು ಹುಡುಕಾಟ ನಡೆಸಿದ್ದು, ಕೆರೆಯ ಬಳಿ ಹೋಗಿ ನೋಡಿದಾಗ ಮೃತಪಟ್ಟಿರುವುದು ಗೊತ್ತಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಾಲಕರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...