alex Certify ಮಲಗಿದ್ದಾಗಲೇ ದೇಹಕ್ಕೆ ಸುತ್ತಿಕೊಂಡು ಕಚ್ಚಿದ ಹಾವು: ಬಾಲಕ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಲಗಿದ್ದಾಗಲೇ ದೇಹಕ್ಕೆ ಸುತ್ತಿಕೊಂಡು ಕಚ್ಚಿದ ಹಾವು: ಬಾಲಕ ಸಾವು

ಬೀದರ್: ಬೀದರ್ ಜಿಲ್ಲೆ ಔರಾದ್ ತಾಲೂಕಿನ ಭಂಡಾರಕುಮಟಾ ಗ್ರಾಮದಲ್ಲಿ ಹಾವು ಕಚ್ಚಿ 8 ವರ್ಷದ ಬಾಲಕ ಮೃತಪಟ್ಟಿದ್ದಾನೆ.

ರಾಮದಾಸ ಮೃತಪಟ್ಟ ಬಾಲಕ ಎಂದು ಹೇಳಲಾಗಿದೆ. ಗುರುವಾರ ರಾತ್ರಿ ತಂದೆ, ತಾಯಿಯೊಂದಿಗೆ ಮಲಗಿದ್ದ ಬಾಲಕನಿಗೆ 5 ಅಡಿ ಉದ್ದದ ಕೊಳಕಮಂಡಲ ಹಾವು ಸುತ್ತಿಕೊಂಡಿದ್ದು, ಬಾಲಕ ಅತ್ತಿದ್ದಾನೆ. ಪಕ್ಕದಲ್ಲೇ ಇದ್ದ ತಂದೆ, ತಾಯಿ ಇದನ್ನು ಗಮನಿಸಿ ಬಾಲಕನಿಗೆ ಸುತ್ತಿಕೊಂಡಿದ್ದ ಹಾವನ್ನು ಬಿಡಿಸಲು ಹರಸಾಹಸ ನಡೆಸಿದ್ದಾರೆ. ಕೊನೆಗೆ ಹಾವನ್ನು ಕೊಂದಿದ್ದಾರೆ. ಈ ವೇಳೆಗೆ ಹಾವು ಬಾಲಕನಿಗೆ ಕಚ್ಚಿದ್ದು, ಆತನನ್ನು ಉದದೀರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ, ಪ್ರಯೋಜನವಾಗಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ರಾಮದಾಸ ಮೃತಪಟ್ಟಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...