alex Certify SHOCKING: ಆಂಬುಲೆನ್ಸ್ ನಲ್ಲಿ ಶವಗಳ ರಾಶಿ, ಒಂದೇ ವಾಹನದಲ್ಲಿ 22 ಮೃತದೇಹ ಸಾಗಣೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಆಂಬುಲೆನ್ಸ್ ನಲ್ಲಿ ಶವಗಳ ರಾಶಿ, ಒಂದೇ ವಾಹನದಲ್ಲಿ 22 ಮೃತದೇಹ ಸಾಗಣೆ…!

ಮಹಾರಾಷ್ಟ್ರದಲ್ಲಿ ಕೊರೋನಾ ಮಹಾಮಾರಿಗೆ ಸಾವಿನ ಸುನಾಮಿಯೇ ಎದ್ದಿದೆ. ಬೀಡ್ ನಗರದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದ 22 ಮಂದಿ ಮೃತದೇಹಗಳನ್ನು ಒಂದೇ ಆಂಬುಲೆನ್ಸ್ ನಲ್ಲಿ ಚಿತಾಗಾರಕ್ಕೆ ಸಾಗಿಸಲಾಗಿದೆ.

ವೈದ್ಯಕೀಯ ಸಾರಿಗೆ ವಾಹನಗಳ ಕೊರತೆಯಿದ್ದ ಕಾರಣ ಒಂದೇ ವಾಹನದಲ್ಲಿ ಮೃತದೇಹಗಳನ್ನು ಸಾಗಿಸಲಾಗಿದೆ ಎಂದು ಬೀಡ್ ಜಿಲ್ಲಾಡಳಿತದಿಂದ ಮಾಹಿತಿ ನೀಡಲಾಗಿದೆ.

ಬೀಡ್ ನಗರದ ಸ್ವಾಮಿ ರಮಾನಂದ ತೀರ್ಥ ಗ್ರಾಮಾಂತರ ಮರಾಠವಾಡ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದ ಕೋವಿಡ್ ನಿಂದ ಮೃತಪಟ್ಟವರ 22 ಶವಗಳನ್ನು ಅಂತ್ಯಕ್ರಿಯೆ ನೆರವೇರಿಸಲು ಚಿತಾಗಾರಕ್ಕೆ ಒಂದೇ ವಾಹನದಲ್ಲಿ ಸಾಗಿಸಲಾಗಿದೆ. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...