alex Certify ಸಾಹಿತಿ ಬಿ.ಎಲ್. ವೇಣುಗೆ ಬೆದರಿಕೆ ಪತ್ರ, ಚಿಂತಕರ ಗಡಿಪಾರು ಮಾಡಲು ಉಲ್ಲೇಖ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಹಿತಿ ಬಿ.ಎಲ್. ವೇಣುಗೆ ಬೆದರಿಕೆ ಪತ್ರ, ಚಿಂತಕರ ಗಡಿಪಾರು ಮಾಡಲು ಉಲ್ಲೇಖ

ಚಿತ್ರದುರ್ಗ: ಸಾವರ್ಕರ್ ಕುರಿತಾಗಿ ಹಗುರವಾಗಿ ಮಾತನಾಡಿದ್ದಕ್ಕೆ ಕ್ಷಮೆ ಕೋರಬೇಕು ಎಂದು ಸಾಹಿತಿ ಬಿ.ಎಲ್. ವೇಣು ಅವರಿಗೆ ಬೆದರಿಕೆ ಪತ್ರ ಬಂದಿದೆ.

ಪೋಸ್ಟ್ ಮೂಲಕ ಬಿ.ಎಲ್. ವೇಣು ನಿವಾಸಕ್ಕೆ ಪತ್ರ ಬಂದಿದ್ದು, ಸ್ವಾತಂತ್ರ್ಯ ಹೋರಾಟದ ಯಜ್ಞ ಕುಂಡಕ್ಕೆ ಸಾವರ್ಕರ್ ಮತ್ತು ಅವರ ಇಡೀ ಕುಟುಂಬ ತಮ್ಮನ್ನು ಅರ್ಪಣೆ ಮಾಡಿಕೊಂಡಿದ್ದು, ಅಂತವರ ಕುರಿತಾಗಿ ನೀವು ಹೀಯಾಳಿಸಿ ಮಾತನಾಡಿರುವುದು ಶೋಭೆ ತರುವಂತಹದ್ದಲ್ಲ. ನೀವು ಕ್ಷಮೆ ಕೋರಲೇಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಬರಗೂರು ರಾಮಚಂದ್ರಪ್ಪ ಅವರನ್ನು ಬೆಂಬಲಿಸಿ ಪತ್ರ ಬರೆದ 61 ಕ್ಕೂ ಹೆಚ್ಚು ವಿಷ ಸರ್ಪಗಳನ್ನು ಏನು ಮಾಡಬೇಕು? ನನ್ನ ಪ್ರಕಾರ, ಎಲ್ಲರನ್ನೂ ಗುಂಡಿಕ್ಕಿ ಕೊಳ್ಳಬೇಕು, ಗಲ್ಲಿಗೇರಿಸಬೇಕು, ದೇಶ ಬಿಟ್ಟು ಓಡಿಸಬೇಕು ಎಂದು ನನ್ನ ಅಭಿವ್ಯಕ್ತಿ ಹೇಳುತ್ತಿದೆ ಎಂದು ಅನಾಮಧೇಯ ಪತ್ರದಲ್ಲಿ ಬರೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...