alex Certify BIG NEWS: ರಾಜ್ಯ ಬಿಜೆಪಿ ಪ್ರಕೋಷ್ಠಗಳಿಗೆ ಸಂಚಾಲಕರ ನೇಮಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯ ಬಿಜೆಪಿ ಪ್ರಕೋಷ್ಠಗಳಿಗೆ ಸಂಚಾಲಕರ ನೇಮಕ

ಬೆಂಗಳೂರು: ರಾಜ್ಯ ಬಿಜೆಪಿ 9 ಪ್ರಕೋಷ್ಠಗಳಿಗೆ ಸಂಚಾಲಕರನ್ನು ನೇಮಕ ಮಾಡಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಸಂಚಾಲಕರು, ಸಹ ಸಂಚಾಲಕರನ್ನು ನೇಮಕ ಮಾಡಿದ್ದಾರೆ.

ಅಸಂಘಟಿತ ಕಾರ್ಮಿಕರ ಪ್ರಕೋಷ್ಠಕ್ಕೆ ವೀರೇಶ್ ಸಂಗಲಾಡ್ ನೇಮಕವಾಗಿದ್ದಾರೆ. ಫಲಾನುಭವಿಗಳ ಪ್ರಕೋಷ್ಠಕ್ಕೆ ಭಗವಂತ್ ಖೂಬಾ, ಪ್ರಸನ್ನ ನಾಯ್ಕ, ವಾಣಿಜ್ಯ – ವ್ಯಾಪಾರ ಪ್ರಕೋಷ್ಠಕ್ಕೆ ಶಿವಕುಮಾರ ಉದಾಸಿ, ಪ್ರಕಾಶ್ ಮಂಡೋಥ್ ಅವರನ್ನು ನೇಮಿಸಲಾಗಿದೆ.

ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಠಕ್ಕೆ ಬಿ.ಎನ್. ನಾರಾಯಣ ಸ್ವಾಮಿ, ಎಸ್.ಎನ್. ರಾಮಸ್ವಾಮಿ, ಆರ್ಥಿಕ ಪ್ರಕೋಷ್ಠಕ್ಕೆ ಕರಣ್ ಜವಾಜಿ, ವಿವಿಧ ಭಾಷಿಕರ ಪ್ರಕೋಷ್ಠಕ್ಕೆ ಇಂದರ್ ನಹರ್, ರಾಜೇಂದ್ರ ಅವರನ್ನು ನೇಮಕ ಮಾಡಲಾಗಿದೆ.

ಕೈಗಾರಿಕಾ ಪ್ರಕೋಷ್ಠಕ್ಕೆ ಚರಣ್ ರಾಜ್ ಗಂಜೂರು, ಪೂರ್ವ ಸೈನಿಕರ ಪ್ರಕೋಷ್ಠಕ್ಕೆ ಬ್ರಿಗೇಡಿಯರ್ ಪೂರ್ವಿಮಠ್, ಹವಾಲ್ದಾರ್ ಕುಮಾರ್, ಶಿಕ್ಷಕರ ಪ್ರಕೋಷ್ಠಕ್ಕೆ ಶಿವಬಸಪ್ಪ ಮಾಲಿ ಪಾಟೀಲ್, ಕೆ,ಎಂ. ಸುರೇಶ್ ಅವರನ್ನು ನೇಮಕ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...