alex Certify ನೈತಿಕ ಪೊಲೀಸ್​​ಗಿರಿಗೆ ಸಾಥ್​ ನೀಡಿದ್ರಾ ಬಿಜೆಪಿ ಶಾಸಕ….? ವಿವಾದದ ಕಿಡಿ ಹೊತ್ತಿಸಿದ ಮೂಡಬಿದ್ರೆ ಎಂಎಲ್​ಎ ನಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೈತಿಕ ಪೊಲೀಸ್​​ಗಿರಿಗೆ ಸಾಥ್​ ನೀಡಿದ್ರಾ ಬಿಜೆಪಿ ಶಾಸಕ….? ವಿವಾದದ ಕಿಡಿ ಹೊತ್ತಿಸಿದ ಮೂಡಬಿದ್ರೆ ಎಂಎಲ್​ಎ ನಡೆ

ನೈತಿಕ ಪೊಲೀಸ್​ಗಿರಿಗೆ ಮೂಡಬಿದ್ರೆ ಶಾಸಕ ಉಮಾನಾಥ್​ ಕೋಟ್ಯಾನ್​ ಸಾಥ್​ ನೀಡಿದ್ದಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ನೈತಿಕ ಪೊಲೀಸ್​ ಗಿರಿ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಆರೋಪಿಗಳಿಗೆ ಬೆಂಬಲ ನೀಡುವ ಮೂಲಕ ಶಾಸಕ ಕೋಟ್ಯಾನ್​ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಅನ್ಯಕೋಮಿನ ದಂಪತಿಯ ವಿರುದ್ಧ ಅನುಚಿತವಾಗಿ ವರ್ತಿಸಿದ ಹಿನ್ನೆಯಲ್ಲಿ ಆರೋಪಿಗಳಾದ ಸಮೀತ್​ ರಾಜ್​ ಹಾಗೂ ಸಂದೀಪ್​ ಪೂಜಾರಿಯನ್ನು ಬಂಧಿಸಲಾಗಿತ್ತು. ಸಮೀತ್​ ರಾಜ್​ ಹಾಗೂ ಸಂದೀಪ್​ ಪೂಜಾರಿ ಅನ್ಯಕೋಮಿನ ದಂಪತಿಯ ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.

ಈ ಪ್ರಕರಣದ ಸಂಬಂಧ ಜೈಲು ಪಾಲಾಗಿದ್ದ ಆರೋಪಿಗಳಿಗೆ ಇಂದು ಜಾಮೀನು ಮಂಜೂರಾಗಿದೆ. ಜಾಮೀನು ಮಂಜೂರಾದ ಆರೋಪಿಗಳ ಬೆನ್ನಿಗೆ ನಿಂತ ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್​​​ ಆರೋಪಿಗಳನ್ನು ಠಾಣೆಯಿಂದ ಹೊರ ತಂದಿದ್ದಾರೆ. ಈ ಘಟನೆಯ ದೃಶ್ಯಾವಳಿಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ಶಾಸಕರ ನಡೆ ಅನೇಕರ ಕೆಂಗಣ್ಣಿಗೀಡಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...