alex Certify BIGG NEWS : ಶಿಕ್ಷಣ ಇಲಾಖೆಯಿಂದ `ಅನಧಿಕೃತ ಶಾಲೆ’ಗಳಿಗೆ ಬಿಗ್ ಶಾಕ್! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ಶಿಕ್ಷಣ ಇಲಾಖೆಯಿಂದ `ಅನಧಿಕೃತ ಶಾಲೆ’ಗಳಿಗೆ ಬಿಗ್ ಶಾಕ್!

 

ಬೆಂಗಳೂರು : 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ ಅನಧಿಕೃತವಾಗಿ ನಡೆಸುತ್ತಿರುವಂತಹ ಶಾಲೆಗಳ ವಿರುದ್ಧ ಕ್ರಮವಹಿಸುವ ಕುರಿತು ರಾಜ್ಯ ಸರ್ಕಾರವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ.

ರಾಜ್ಯದಲ್ಲಿನ ಕೆಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಕರ್ನಾಟಕ ಶಿಕ್ಷಣ ಕಾಯಿದೆ-1983 ಸೆಕ್ಷನ್-30, 31 ರ ಪ್ರಕಾರ ಶಿಕ್ಷಣ ಇಲಾಖಾ ವತಿಯಿಂದ ಯಾವುದೇ ನೋಂದಣಿಯನ್ನು ಪಡೆಯದ ಅನಧಿಕೃತವಾಗಿ ಶಾಲೆಗಳನ್ನು ನಡೆಸುತ್ತಿರುವುದಕ್ಕೆ ಸಂಬಂಧಪಟ್ಟಂತೆ ನಿಮ್ಮ ಜಿಲ್ಲೆಯಲ್ಲಿ ಕೆಳಕಂಡಂತೆ ಅಂದರೆ *ನೋಂದಣಿಯನ್ನು ಪಡೆಯದೆ ಅನಧಿಕೃತವಾಗಿ ಶಾಲೆ ನಡೆಸುತ್ತಿರುವುದು, “ನೋಂದಣಿ ಇಲ್ಲದೆ ಉನ್ನತೀಕರಿಸಿದ ತರಗತಿಗಳನ್ನು ನಡೆಸುತ್ತಿರುವುದು, *ಅನಧಿಕೃತ ಪಠ್ಯಕ್ರಮ,ಮತ್ತು ಅನಧಿಕೃತ ಪಠ್ಯಪುಸ್ತಕ ಬೋಧಿಸುತ್ತಿರುವುದು, *ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜಿಸಿದ ನಂತರವೂ ರಾಜ್ಯ ಪಠ್ಯಕ್ರಮದ ಶಾಲೆ ನಡೆಸುತ್ತಿರುವುದು ಅತ್ಯಂತ ಆಕ್ಷೇಪಾರ್ಹ/ ನಿಯಮಬಾಹಿರವಾಗಿರುತ್ತದೆ. ಸೇರಿದಂತೆ ಇಂತಹ ಪುಕರಣಗಳಿಗೆ ಉಲ್ಲೇಖಿತ (4)ರಲ್ಲಿ ಸರ್ಕಾರವು ಪ್ರಕರಣಗಳವಾರು 45 ದಿನಗಳ ಕಾಲಾವಕಾಶ ನೀಡಲಾಗಿತ್ತು.

ದಿನಾಂಕ:20-6-2023 ಮತ್ತು ದಿನಾಂಕ:01-07-2023 ರಲ್ಲಿ ಆಡಳಿತ ಮಂಡಳಿಗಳಿಗೆ 45 ದಿನಗಳ ಕಾಲಾವಕಾಶವನ್ನು ನೀಡಿ 2023-24ನೇ ಶೈಕ್ಷಣಿಕ ಸಾಲಿನ ದಾಖಲಾತಿ ಪ್ರಾರಂಭಾವಾಗುವ ಮುನ್ನವ ತಕ್ಷಣ ನಿಯಮಾನುಸಾರ ಕ್ರಮವಹಿಸುವಂತೆಯೂ ಹಾಗೂ ನಂತರದಲ್ಲಿ ಮುಂದುವರೆಸಿದ್ದಲ್ಲಿ ಅಂತಹ ಶಾಲೆಗಳಿಗೆ ಪೋಷಕರು ಮಕ್ಕಳನ್ನು ದಾಖಲಿಸದಂತೆ ಸಾರ್ವಜನಿಕವಾಗಿ ಪ್ರಕಟಣೆಯನ್ನು ನೀಡುವ ಕುರಿತು ಕ್ರಮವಹಿಸಿ ಎಸ್.ಎ.ಟಿ.ಎಸ್.ನಲ್ಲಿ ಇಂದೀಕರಿಸುವುದನ್ನು ನಿರ್ಬಂಧಿಸಿ ಜಿಲ್ಲಾ ಮಾಹಿತಿಯನ್ನು ಕ್ರೋಢೀಕರಿಸಿ ನೋಂದಣಿ/ರದ್ದತಿ ಪ್ರಾಧಿಕಾರಿಯಾಗಿರುವ ಉಪನಿರ್ದೇಶಕರು (ಆಡಳಿತ) ರವರುಗಳು ದಿನಾಂಕ:25-5-2023 ರೊಳಗೆ ಎಲ್ಲಾ ದಾಖಲೆಗಳೊಂದಿಗೆ ಈ ಆಯುಕ್ತಾಲಯಕ್ಕೆ ಸಲ್ಲಿಸುವಂತೆ ಸೂಚಿಸಲಾಗಿತ್ತು.

ಅನಧಿಕೃತ ಶಾಲೆಗಳಿದ್ದರೂ ಇಲಾಖೆಯು ರಾಜ್ಯದಲ್ಲಿನ ಅನಧಿಕೃತ ಶಾಲೆಗಳಿಗೆ ಸಂಬಂಧಪಟ್ಟಂತೆ ದಿನಪತ್ರಿಕೆಯಲ್ಲಿ 1300 ಕ್ರಮವಹಿಸಿರುವುದಿಲ್ಲವೆಂದು ಪಕಟವಾಗಿರುವ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಉಲ್ಲೇಖಿತ (7)ರ ಟಿಪ್ಪಣಿಯಲ್ಲಿ ಸೂಚಿಸಿರುತ್ತಾರೆ.

ಈ ಕುರಿತಂತ ರಾಜ್ಯದಲ್ಲಿನ ಅನಧಿಕೃತ ಶಾಲೆಗಳ ಬಗ್ಗೆ ಜಿಲ್ಲೆಗಳಲ್ಲಿ ಅನುಪಾಲನೆಯಾಗಿರುವ ಬಗ್ಗೆ ಪರಿಶೀಲಿಸಿದ ಸಂದರ್ಭದಲ್ಲಿ ಉಪನಿರ್ದೇಶಕರುಗಳಿಂದ ಈ ಕಛೇರಿಗೆ ಕೇವಲ 16 ಜಿಲ್ಲೆಗಳು ಮಾತ್ರ ಮಾಹಿತಿ ನೀಡಿದ್ದು ಉಳಿದವರು ಯಾವುದೇ ಮಾಹಿತಿ ನೀಡಿರುವುದಿಲ್ಲ ಮಾಹಿತಿ ನಿಡಿರುವವರೂ ಸಹ ನಿಖರವಾದ ಮಾಹಿತಿ ಸಲ್ಲಿಕೆಯಾಗಿರುವುದಿಲ್ಲ. ಖಾಸಗಿ ಶಾಲಾ ನೋಂದಣಿ/ಮಾನತ ಪ್ರಾಧಿಕಾರಿಗಳಾದ ನೀವುಗಳು ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ನಿರ್ಲಕ್ಷತೆ ತೊರುತ್ತಿರುವುದು ಇಂತಹ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳದಿರುವುದು, ಪತ್ರಿಕಾ ಪ್ರಕಟಣೆ ನೀಡದಿರುವುದು ಇಲಾಖೆಯನ್ನು ಮುಜುಗರಗಿಡಾಗಿದ ತಕ್ಷಣ ವೈಯಕ್ತಿಕ ಗಮನಹರಿಸಿ ಕೆಳಕಂಡಂತೆ ಕ್ರಮವಹಿಸಲು ಸೂಚಿಸಿದೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...