alex Certify BIG NEWS: BSY ಕಂಟ್ರೋಲ್ ನಲ್ಲಿಡಲು IT ದಾಳಿ; ರಮೇಶ್ ಜಾರಕಿಹೊಳಿ ವಿರುದ್ಧವೂ ಬಾಂಬ್ ಸಿಡಿಸಿದ ಡಿ.ಕೆ. ಶಿವಕುಮಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: BSY ಕಂಟ್ರೋಲ್ ನಲ್ಲಿಡಲು IT ದಾಳಿ; ರಮೇಶ್ ಜಾರಕಿಹೊಳಿ ವಿರುದ್ಧವೂ ಬಾಂಬ್ ಸಿಡಿಸಿದ ಡಿ.ಕೆ. ಶಿವಕುಮಾರ್

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜನರಿಗೆ ಶಾಪವಾಗಿದೆ: ಡಿ ಕೆ ಶಿವಕುಮಾರ್- Kannada Prabha

ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಪ್ತನ ನಿವಾಸದ ಮೇಲೆ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಯಡಿಯೂರಪ್ಪನವರನ್ನು ಕಂಟ್ರೋಲ್ ನಲ್ಲಿಡಲು ಐಟಿ ದಾಳಿ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಬಿ.ಎಸ್.ವೈ. ಅವರನ್ನು ಕಂಟ್ರೋಲ್ ನಲ್ಲಿ ತೆಗೆದುಕೊಳ್ಳಲು ಈ ದಾಳಿ ನಡೆದಿದೆ. ದೆಹಲಿಯಿಂದಲೇ ಎಲ್ಲವನ್ನೂ ಕಂಟ್ರೋಲ್ ಮಾಡುತ್ತಿದ್ದಾರೆ. ಐಟಿ ಅಧಿಕಾರಿಗಳ ದಾಳಿ ಹಿಂದೆ ಒಳ ರಾಜಕೀಯವಿದೆ ಎಂದರು.

ಇಂದು ‘ಟಾಮ್ & ಜೆರ್ರಿ’ ಚಿತ್ರದ ಮತ್ತೊಂದು ವಿಡಿಯೋ ಸಾಂಗ್ ರಿಲೀಸ್

ಇದೇ ವೇಳೆ ಯಾರ್ಯಾರು ಹೋಟೆಲ್ ನಲ್ಲಿ ಕೂತು ಸಭೆ ನಡೆಸಿದರು. ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಅವರ ಮೇಲೂ ತೆರಿಗೆ ಇಲಾಖೆಯಿಂದ ದಾಳಿ ಆಗಬೇಕಲ್ವಾ? ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಬಾಂಬ್ ಸಿಡಿಸಿದ್ದಾರೆ.

ನೀರಾವರಿ ಇಲಾಖೆಯಲ್ಲಿ ಕಳೆದ 1 ವರ್ಷದಿಂದ ಎಲ್ಲಾ ನಡೆಯುತ್ತಿದೆ. ಬೆಂಕಿ ಇಲ್ಲದೇ ಯಾವತ್ತೂ ಹೊಗೆ ಆಡಲ್ಲ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...