alex Certify BIG NEWS: 6 ತಿಂಗಳಾದರೂ ಯಡಿಯೂರಪ್ಪನವರನ್ನು ಮುಂದುವರಿಸಿ; ಮಠಾಧೀಶರ ಮಾತು ಗೌರವಿಸಿ; ಹೈಕಮಾಂಡ್ ಗೆ ಮತ್ತೆ ಎಚ್ಚರಿಕೆ ನೀಡಿದ ಸ್ವಾಮೀಜಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 6 ತಿಂಗಳಾದರೂ ಯಡಿಯೂರಪ್ಪನವರನ್ನು ಮುಂದುವರಿಸಿ; ಮಠಾಧೀಶರ ಮಾತು ಗೌರವಿಸಿ; ಹೈಕಮಾಂಡ್ ಗೆ ಮತ್ತೆ ಎಚ್ಚರಿಕೆ ನೀಡಿದ ಸ್ವಾಮೀಜಿಗಳು

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಿಸಬಾರದು ಎಂದು ಒತ್ತಾಯಿಸಿ ಮಠಾಧೀಶರು ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸುತ್ತಿದ್ದು, 500ಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿದ್ದಾರೆ.

ಈ ವೇಳೆ ಮಾತನಾಡಿದ ನಿಡುಮಾಮಿಡಿ ಮಠದ ಸ್ವಾಮೀಜಿ, ಬಿ ಎಸ್ ವೈ ದಕ್ಷತೆ, ಕ್ರೀಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ನೆರೆ, ಬರ ಬಂದಾಗ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಕೊರೊನಾ ಮೂರನೆ ಅಲೆ ಭೀತಿ ಎದುರಾಗಿದೆ. ಪ್ರವಾಹ ಪರಿಸ್ಥಿತಿ ಎದುರಾಗಿದೆ. ವಯಸ್ಸು ಮೀರಿದೆ ಎಂಬ ಒಂದು ಕಾರಣಕ್ಕೆ ಇಂತಹ ಸಂದರ್ಬದಲ್ಲಿ ಸಿಎಂ ಬದಲಾವಣೆ ಸರಿಯಲ್ಲ ಮಠಾಧೀಶರ ಮಾತಿಗೆ ಹೈಕಮಾಂಡ್ ಗೌರವ ನೀಡಬೇಕು ಎಂದು ಹೇಳಿದರು.

ನಿಖಿಲ್ ಕುಮಾರಸ್ವಾಮಿ ನಟನೆಯ ‘ರೈಡರ್’ ಚಿತ್ರದ ಕೊನೆಯ ಹಂತದ ಶೂಟಿಂಗ್ ಫ್ರಾರಂಭ

ಬಿ ಎಸ್ ವೈಗೆ ಸರಿ ಸಾಟಿಯಾದ ನಾಯಕ ಬೇರೆ ಇಲ್ಲ. ಜಾತಿ, ಮತ ಎಲ್ಲವನ್ನೂ ಮೀರಿದ ನಾಯಕ ಅವರು. ಯಡಿಯೂರಪ್ಪ ಅವರನ್ನು ಸಿಎಂ ಆಗಿ ಮುಂದುವರೆಸಬೇಕು. ಇನ್ನು 6 ತಿಂಗಳ ಕಾಲವಾದರೂ ಯಡಿಯೂರಪ್ಪ ಮುಂದುವರೆಯಲಿ ಎಂಬುದು ನಮ್ಮೆಲ್ಲರ ಅಭಿಮತ. ವರಿಷ್ಠರು ಸ್ವಾಮೀಜಿಗಳ ಮಾತಿಗಾದರೂ ಬೆಲೆ ಕೊಡಬೇಕು. ನಂತರ ನಿಮ್ಮ ಇಚ್ಛೆಯಂತೆ ನಡೆದುಕೊಳ್ಳು ಎಂದು ತಿಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...