alex Certify BIG NEWS: ಹಿನ್ನಡೆ ಅನುಭವಿಸಿದ ಮೂವರು ಹಾಲಿ ಸಿಎಂಗಳು..! ಗೆಲುವಿನ ಹಾದಿಯಲ್ಲಿ ಯೋಗಿ ಆದಿತ್ಯನಾಥ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹಿನ್ನಡೆ ಅನುಭವಿಸಿದ ಮೂವರು ಹಾಲಿ ಸಿಎಂಗಳು..! ಗೆಲುವಿನ ಹಾದಿಯಲ್ಲಿ ಯೋಗಿ ಆದಿತ್ಯನಾಥ್​

ಪಂಚ ರಾಜ್ಯಗಳಲ್ಲಿ ಮತ ಎಣಿಕೆ ನಡೆಯುತ್ತಿರುವ ಬೆನ್ನಲ್ಲೇ ಕೆಲವು ಕ್ಷೇತ್ರಗಳಲ್ಲಿ ಮೊದಲ ಹಂತದ ಮತ ಎಣಿಕೆಯು ಎಲ್ಲರನ್ನೂ ಆಶ್ಚರ್ಯಕ್ಕೊಳಪಡಿಸಿದೆ.

ಆರಂಭಿಕ ಟ್ರೆಂಡ್​ಗಳಲ್ಲಿ ಬಿಜೆಪಿ 203 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಬಹುಮತದ ಗಡಿಯನ್ನು ದಾಟಿದೆ. ಇತ್ತ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ 4500ಕ್ಕೂ ಅಧಿಕ ಮತಗಳಿಂದ ಗೋರಖ್​ಪುರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮೂವರು ಹಾಲಿ ಸಿಎಂಗಳು ತಮ್ಮ ಕ್ಷೇತ್ರಗಳಲ್ಲಿ ಹಿನ್ನಡೆ ಕಾಯ್ದುಕೊಂಡಿದ್ದಾರೆ.

ಗೋವಾದಲ್ಲಿ ಬಿಜೆಪಿ ಹಾಲಿ ಸಿಎಂ ಪ್ರಮೋದ್​ ಸಾವಂತ್​ ಸಾಂಕ್ವೆಲಿಮ್​ ಕ್ಷೇತ್ರದಲ್ಲಿ 400 ಮತಗಳಿಂದ ಹಿಂದುಳಿದಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಧರ್ಮೇಶ್​ ಸಗ್ಲಾನಿ ಮುನ್ನಡೆ ಸಾಧಿಸಿದ್ದಾರೆ.

ಉತ್ತರಾಖಂಡ್​ನಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬರುವ ಇರಾದೆಯನ್ನು ಹೊಂದಿದ್ದರೆ ಸಿಎಂ ಪುಷ್ಕರ್​​ ಸಿಂಗ್​ ಧಾಮಿ ಖತಿಮಾ ಕ್ಷೇತ್ರದಿಂದ ಹಿಂದುಳಿದಿದ್ದಾರೆ.
ಪಂಜಾಬ್​ ಸಿಎಂ ಚರಣ್​ಜೀತ್​ ಸಿಂಗ್​ ಚನ್ನಿ ಭದೌರ್​ ಹಾಗೂ ಚಮ್ಕೌರ್​ ಸಾಹಿಬ್​ಗಳೆರಡರಲ್ಲಿಯೂ ಹಿನ್ನಡೆ ಅನುಭವಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...