alex Certify BIG NEWS: ಹಬ್ಬ ಮುಗಿಯುತ್ತಲೇ ಮಾಂಸದಂಗಡಿಗಳ ಮುಂದೆ ಸಾಲುಗಟ್ಟಿ ನಿಂತ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹಬ್ಬ ಮುಗಿಯುತ್ತಲೇ ಮಾಂಸದಂಗಡಿಗಳ ಮುಂದೆ ಸಾಲುಗಟ್ಟಿ ನಿಂತ ಜನ

ಶ್ರಾವಣ ಮಾಸ ಈಗಾಗಲೇ ಮುಗಿದಿದೆಯಾದರೂ ಬಹುತೇಕರು ಗಣಪತಿ ಹಬ್ಬದ ಬಳಿಕವೇ ಮಾಂಸಾಹಾರ ಸೇವನೆಗೆ ಮುಂದಾಗುತ್ತಾರೆ. ಹೀಗಾಗಿ ಇಂದು ಚಿಕನ್ ಹಾಗೂ ಮಟನ್ ಅಂಗಡಿಗಳ ಮುಂದೆ ಬೆಳಿಗ್ಗೆಯಿಂದಲೇ ಜನ ಕಾದು ನಿಂತಿದ್ದರು.

ಕಳೆದ ಒಂದು ತಿಂಗಳಿನಿಂದ ಮಾಂಸಾಹಾರ ಸೇವನೆ ಮಾಡದೆ ಚಡಪಡಿಸುತ್ತಿದ್ದವರು ಇಂದಿನಿಂದ ಗ್ರೀನ್ ಸಿಗ್ನಲ್ ಸಿಕ್ಕಿರುವ ಕಾರಣ ತಮಗಿಷ್ಟವಾದ ಖಾದ್ಯಗಳನ್ನು ಮಾಡಿಸಿಕೊಂಡು ತಿನ್ನಲು ಕಾತರದಿಂದ ಇದ್ದಾರೆ.

ಆಷಾಡ ಮಾಸ ಮುಗಿದ ಬಳಿಕ ಶ್ರಾವಣದಲ್ಲಿ ಒಂದು ತಿಂಗಳ ಕಾಲ ಬಹುತೇಕರು ಮಾಂಸಹಾರ ಸೇವನೆ ಮಾಡುವುದಿಲ್ಲ. ಗಣಪತಿ ಹಬ್ಬ ಮುಗಿದ ಮರುದಿನದಿಂದ ಎಂದಿನಂತೆ ತಮಗನುಕೂಲವಾದ ದಿನ ಮಾಂಸಾಹಾರ ಸೇವನೆ ಮಾಡುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...