alex Certify BIG NEWS: ಸ್ವಲ್ಪದರಲ್ಲಿಯೇ ತಪ್ಪಿದ ಭಾರಿ ದುರಂತ; ರಸ್ತೆ ಬದಿ ಪಲ್ಟಿಯಾದ ಮತ್ತೊಂದು ಖಾಸಗಿ ಬಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸ್ವಲ್ಪದರಲ್ಲಿಯೇ ತಪ್ಪಿದ ಭಾರಿ ದುರಂತ; ರಸ್ತೆ ಬದಿ ಪಲ್ಟಿಯಾದ ಮತ್ತೊಂದು ಖಾಸಗಿ ಬಸ್

ಚಾಮರಾಜನಗರ: ತುಮಕೂರಿನ ಪಾವಗಡ ಪಳವಳ್ಳಿ ಕಟ್ಟೆಯಲ್ಲಿ ನಿನ್ನೆಯಷ್ಟೇ ನಡೆದಿದ್ದ ಬಸ್ ದುರಂತ ಪ್ರಕರಣದ ಬೆನ್ನಲ್ಲೇ ಇಂದು ಮತ್ತೊಂದು ಬಸ್ ಅಪಘಾತ ನಡೆದಿದ್ದು, ಸ್ವಲ್ಪದರಲ್ಲಿಯೇ ಅನಾಹುತವೊಂದು ತಪ್ಪಿದೆ.

ಎದುರಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿಹೊಡೆಯುವುದನ್ನು ತಪ್ಪಿಸಲು ಹೋಗಿ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಪಲ್ಟಿಯಾದ ಘಟನೆ ಚಾಮರಾಜನಗರದ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ದೇಶದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ: ಜನತಾ ಪರಿವಾರ ಒಗ್ಗೂಡುವಲ್ಲಿ ಮೊದಲ ಹೆಜ್ಜೆ, ಬೇರೆಯಾಗಿ 25 ವರ್ಷಗಳ ನಂತ್ರ ಒಂದಾದ ಲಾಲೂ -ಶರದ್ ಯಾದವ್; RJD ಯಲ್ಲಿ LJD ವಿಲೀನ

ಹನೂರು ತಾಲೂಕಿನ ಮಂಗಲ-ಕಾಮಗೆರೆ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಕೊಳ್ಳೆಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...