alex Certify BIG NEWS: ಸ್ನೇಹಕ್ಕಷ್ಟೇ ರಾಜಿ; ವಂಚನೆ ಪ್ರಕರಣಕ್ಕಿಲ್ಲ ರಾಜಿ ಸಂಧಾನ; ನಿರ್ಮಾಪಕ ಉಮಾಪತಿ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸ್ನೇಹಕ್ಕಷ್ಟೇ ರಾಜಿ; ವಂಚನೆ ಪ್ರಕರಣಕ್ಕಿಲ್ಲ ರಾಜಿ ಸಂಧಾನ; ನಿರ್ಮಾಪಕ ಉಮಾಪತಿ ಹೇಳಿಕೆ

ಬೆಂಗಳೂರು: ನಟ ದರ್ಶನ್ ಹೆಸರಲ್ಲಿ 25 ಕೋಟಿ ರೂ. ವಂಚನೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ನೇಹಿತರಲ್ಲಿ ಇದ್ದ ಗೊಂದಲಗಳನ್ನು ಬಗೆಹರಿಸಿಕೊಂಡಿದ್ದೇವೆ. ಆದರೆ ವಂಚನೆ ಪ್ರಕರಣದ ತನಿಖೆ ಮುಂದುವರೆಯಲಿದೆ ಎಂದು ನಿರ್ಮಾಪಕ ಉಮಾಪತಿ ತಿಳಿಸಿದ್ದಾರೆ.

ಕುಟುಂಬ ಸಮೇತ ಬನಶಂಕರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಉಮಾಪತಿ, ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳಲ್ಲ. ನಮ್ಮ ನಿರ್ಮಾಪಕರನ್ನು ಬಿಟ್ಟುಕೊಡಲ್ಲ ಎಂದು ದರ್ಶನ್ ಸರ್ ಕೂಡ ಹೇಳಿದ್ದಾರೆ. ಸ್ನೇಹಿತರ ನಡುವಿನ ಗೊಂದಲ ಬಗೆಹರಿದಿದೆ. ಹಾಗಂತ ವಂಚನೆ ಪ್ರಕರಣ ಮುಕ್ತಾಯವಾಗಿದೆ ಎಂದಲ್ಲ. ಕಾನೂನು ಮೂಲಕ ಮುಂದುವರೆಯುತ್ತೇವೆ ಎಂದರು.

ಫುಟ್ಬಾಲ್ ವಿಶ್ವಕಪ್ ವಿಜೇತ ತಂಡದ ಕುರಿತು 2013 ರಲ್ಲೇ ಹೆಳಲಾಗಿತ್ತು ಭವಿಷ್ಯ….!

ನಾನು ದರ್ಶನ್ ಬಗ್ಗೆ ಆರೋಪ ಮಾಡಿಲ್ಲ, ಅವರೂ ನನ್ನ ವಿರುದ್ಧ ಆರೋಪ ಮಾಡಿಲ್ಲ ನಿನ್ನೆ ದರ್ಶನ್ ಭೇಟಿಯಾಗಿ ಮಾತುಕತೆ ನಡೆಸಿದ್ದು, ಗೊಂದಲಗಳನ್ನು ಬಗೆಹರಿಸಿಕೊಂಡಿದ್ದೇವೆ ಎಂದು ಹೇಳಿದರು.

ಇನ್ನು ನಾನು ನೇರವಾದ ವ್ಯಕ್ತಿ ಕಳ್ಳ ಅಲ್ಲ. ಒಂದು ವೇಳೆ ನಾನು ತಪ್ಪು ಮಾಡಿದ್ದರೆ ಸಿಸಿಬಿ ಕಚೇರಿಗೆ ಹೋಗುತ್ತಿರಲಿಲ್ಲ. ಅರುಣಾಕುಮಾರಿ ಸುದ್ದಿಗೋಷ್ಠಿ ಸಡೆಸಲಿ. ಏನೇನು ದಾಖಲೆಗಳಿವೆ ಅದನ್ನು ನೀಡಲಿ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...