alex Certify BIG NEWS: ಸಿದ್ದರಾಮಯ್ಯನವರೇ ನೀವ್ಯಾಕೆ ಹೀಗಾದ್ರೀ…? ಮತ್ತೆ ವಿಪಕ್ಷ ನಾಯಕನ ವಿರುದ್ಧ ಕಿಡಿಕಾರಿದ ಸಿ.ಟಿ. ರವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿದ್ದರಾಮಯ್ಯನವರೇ ನೀವ್ಯಾಕೆ ಹೀಗಾದ್ರೀ…? ಮತ್ತೆ ವಿಪಕ್ಷ ನಾಯಕನ ವಿರುದ್ಧ ಕಿಡಿಕಾರಿದ ಸಿ.ಟಿ. ರವಿ

ಶಾಸಕ - ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಗೆ ಪಿತೃ ವಿಯೋಗ- Kannada Prabha

ಬೆಂಗಳೂರು: ಮತಾಂಧತೆ ರಾಜಕಾರಣ ಮಾಡಿದ್ದು ಕಾಂಗ್ರೆಸ್, ಸಿದ್ದರಾಮಯ್ಯ. ಬಿಜೆಪಿ ಮಾಡಿದ್ದು ರಾಷ್ಟ್ರವಾದ, ಹಿಂದೂತ್ವ, ವಿಕಾಸವಾದ ರಾಜಕಾರಣ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಪ್ರಕೋಷ್ಠ ಸಮಾವೇಶದಲ್ಲಿ ಮಾತನಾಡಿದ ಸಿ.ಟಿ. ರವಿ, ಸಿದ್ದರಾಮಯ್ಯನವರೇ ಮನೆಹಾಳು, ಜಾತಿ ರಾಜಕಾರಣ ಮಾಡಿದ್ದು ಹೊರತು ಬಿಜೆಪಿಯವರಲ್ಲ. ಶುದ್ಧ ಹಿಂದೂ ಆಗಲಿ ಎಂದು ನಿಮ್ಮ ತಂದೆ ಸಿದ್ದರಾಮಯ್ಯ ಅಂತಾ ಹೆಸರಿಟ್ಟರು. ಆದರೆ ಸಿದ್ದರಾಮಯ್ಯನವರೇ ನೀವ್ಯಾಕೆ ಹೀಗಾದ್ರಿ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಜನ ನಿಮ್ಮನ್ನು ಸಿದ್ರಾಮುಲ್ಲಾಖಾನ್ ಎಂದು ಕರೆಯುತ್ತಿದ್ದಾರೆ. ನಿಮ್ಮ ತಂದೆಯ ಆತ್ಮ ವಿಲವಿಲ ಅಂತಾ ಒದ್ದಾಡುತ್ತಿರಬಹುದು. ಟಿಪ್ಪು ಜಯಂತಿ ಆಚರಿಸಿದ ಮತಾಂಧ ರಾಜಕಾರಣಿ ಸಿದ್ದರಾಮಯ್ಯ. ಮಕ್ಕಳ ಮನಸ್ಸಿನಲ್ಲೂ ಜಾತಿ ವಿಷ ಬೀಜ ಬಿತ್ತಿದ ಕುಖ್ಯಾತಿ ಸಿದ್ದರಾಮಯ್ಯನವರದ್ದು. ಯಾರಿಗಾದರೂ ನಾನೇ ಸಿಎಂ ಅನ್ನಿಸಿದರೆ ಅದು ತಿರುಕನ ಕನಸು ಎಂದು ವಾಗ್ದಾಳಿ ನಡೆಸಿದರು.

ಗುಜರಾತ್ ನಲ್ಲಿ ಐರನ್ ಲೆಗ್ ಹೋಗುವ ಮೊದಲೇ ಕಾಂಗ್ರೆಸ್ 77 ಸೀಟ್ ಪಡೆದಿತ್ತು. ಐರನ್ ಲೆಗ್ ಹೋದಮೇಲೆ 17 ಸ್ಥಾನಕ್ಕಿಳಿದಿದೆ. 1 ಚಿಟಿಕೆ ಹೊಡೆದರೆ 17ರಲ್ಲಿ ಎಷ್ಟು ಖಾಲಿಯಾಗುತ್ತೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...