alex Certify BIG NEWS: ಸಿಜೇರಿಯನ್ ಆದ ಬಾಣಂತಿಯರ ಹೊಲಿಗೆ ಬಿಚ್ಚಿ ಕಳುಹಿಸಿದ್ದ ವೈದ್ಯರು; ರಕ್ತಸ್ರಾವದಿಂದ 15ಕ್ಕೂ ಹೆಚ್ಚು ಮಹಿಳೆಯರ ನರಳಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿಜೇರಿಯನ್ ಆದ ಬಾಣಂತಿಯರ ಹೊಲಿಗೆ ಬಿಚ್ಚಿ ಕಳುಹಿಸಿದ್ದ ವೈದ್ಯರು; ರಕ್ತಸ್ರಾವದಿಂದ 15ಕ್ಕೂ ಹೆಚ್ಚು ಮಹಿಳೆಯರ ನರಳಾಟ

ವಿಜಯಪುರ: ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಎಡವಟ್ಟಿನಿಂದಾಗಿ ಸಿಜೇರಿಯನ್ ಹೆರಿಗೆಯಾದ ಬಾಣಂತಿಯರು ನರಳಾಡುತ್ತಿರುವ ಪರಿಸ್ಥಿತಿ ಎದುರಾಗಿದೆ.

ಸಿಜೇರಿಯನ್ ಡೆಲಿವರಿ ಆದ ಬಾಣಂತಿಯರ ಆಪರೇಷನ್ ಸ್ಟಿಚ್ ಬಿಚ್ಚಿದ ಪರಿಣಾಮ 15ಕ್ಕೂ ಹೆಚ್ಚು ಮಹಿಳೆಯರು ರಕ್ತಸ್ರಾವದಿಂದ ಬಳಲುತ್ತಿದ್ದಾರೆ. ಸಿಜೇರಿಯನ್ ಹೆರಿಗೆಯಾದ ಬಾಣಂತಿಯರ ಹೊಲಿಗೆ ಬಿಚ್ಚಿ ಡಿಸ್ಚಾರ್ಜ್ ಮಾಡಿ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿತ್ತು. ಮನೆಗೆ ಹೋದ ಬಳಿಕ ಬಾಣಂತಿಯರಿಗೆ ರಕ್ತಸ್ರಾವ ಆರಂಭವಾಗಿದ್ದು, ವಾಪಸ್ ಆಸ್ಪತ್ರೆಗೆ ಧಾವಿಸಿದ್ದಾರೆ.

ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ನಿರ್ಲಕ್ಷವೇ ಕಾರಣ ಎಂದು ಬಾಣಂತಿಯರು ಆರೋಪಿಸಿದ್ದಾರೆ.

ಈ ಬಗ್ಗೆ ಸಮರ್ಥಿಸಿಕೊಂಡಿರುವ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಎಲ್. ಲಕ್ಕಣ್ಣವರ್, ಆಸ್ಪತ್ರೆಯಲ್ಲಿ ಒಂದೇ ಆಪರೇಷನ್ ಥಿಯೇಟರ್ ಇದೆ. ದಿನಕ್ಕೆ ಸರಾಸರಿ 40ಕ್ಕೂ ಹೆಚ್ಚು ಹೆರಿಗೆ ಕೇಸ್ ಗಳು ಬರುತ್ತಿವೆ. ಈ ಪೈಕಿ 15 ಮಹಿಳೆಯರಿಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿದೆ. ಒಂದೇ ಶಸ್ತ್ರಚಿಕಿತ್ಸಾ ಘಟಕ ಇರುವುದರಿಂದ ಸಮಸ್ಯೆಯಾಗಿದೆ. ಪುನಃ ಆಸ್ಪತ್ರೆಗೆ ದಾಖಲಾಗಿರುವ ಬಾಣಂತಿಯರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...