alex Certify BIG NEWS; ಸಂಪುಟ ವಿಸ್ತರಣೆ ಈಗಲೇ ಮಾಡಲಿ, ವಿಳಂಬವಾಗುವುದಾದರೆ ಮಾಡುವುದೇ ಬೇಡ ಎಂದ ಶಾಸಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS; ಸಂಪುಟ ವಿಸ್ತರಣೆ ಈಗಲೇ ಮಾಡಲಿ, ವಿಳಂಬವಾಗುವುದಾದರೆ ಮಾಡುವುದೇ ಬೇಡ ಎಂದ ಶಾಸಕ

ಬೆಳಗಾವಿ: ಈಗಾಗಲೇ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಇನ್ನಷ್ಟು ವಿಳಂಬವಾಗುತ್ತೆ ಎನ್ನುವುದಾದರೆ ಮಾಡುವುದೇ ಬೇಡ ಎಂದು ಶಾಸಕ ಅಭಯ್ ಪಾಟೀಲ್ ತಿಳಿಸಿದ್ದಾರೆ.

ಸಚಿವ ಉಮೇಶ್ ಕತ್ತಿ ನೇತೃತ್ವದಲ್ಲಿ ನಡೆದ ಸಭೆ ವಿಚಾರವಾಗಿ ಮಾತನಾಡಿದ ಅಭಯ್ ಪಾಟೀಲ್, ಸಚಿವ ಕತ್ತಿ ನಿವಾಸದಲ್ಲಿ ಯಾವುದೇ ಗೌಪ್ಯ ಸಭೆ ನಡೆದಿಲ್ಲ. ಬಜೆಟ್ ಅಧಿವೇಶನದಲ್ಲಿ ಜಿಲ್ಲೆಗೆ ಅನುಕೂಲವಾಗುವ ಯೋಜನೆ ಕುರಿತು ಚರ್ಚೆ ನಡೆಸಿದ್ದೇವೆ. ಸಭೆಗೆ ನಾನು ತಡವಾಗಿ ಹೋಗಿದ್ದೆ. ನಾನು ಹೋಗಿದ್ದ ವೇಳೆ ಸಂಪುಟ ವಿಸ್ತರಣೆ ವಿಚಾರವಾಗಿ ಯಾವುದೇ ಚರ್ಚೆ ನಡೆದಿಲ್ಲ ಎಂದರು.

ಸಂಪುಟ ವಿಸ್ತರಣೆ ಆಗುವುದಿದ್ದರೆ ಈಗಲೇ ಮಾಡಲಿ. ಇನ್ನೂ ತಡವಾಗುವುದಾದರೆ ಮಾಡುವುದೇ ಬೇಡ. 2006ರಿಂದ ಇದೇ ರೀತಿ ನಡೆದುಕೊಂಡು ಬಂದಿದೆ. ಚುನಾವಣೆಗೆ ಕೇವಲ ಒಂದು ವರ್ಷ ಬಾಕಿಯಿದೆ. ಸಚಿವರಾದವರಿಗೆ ಅಭಿವೃದ್ಧಿ ಕೆಲಸ ಮಾಡಲು ಸಮಯವಾದರೂ ಬೇಕಲ್ಲವೇ? ಇನ್ನೂ ವಿಳಂಬ ಮಾಡಿ ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಏನೂ ಪ್ರಯೋಜನವಾಗದು ಎಂದು ಬೇಸರ ವ್ಯಕ್ತಪಡಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...