alex Certify BIG NEWS: ಶಾಲೆಯಲ್ಲಿ ಸಂಘಪರಿವಾರದಿಂದ ತ್ರಿಶೂಲ ದೀಕ್ಷೆ, ಏರ್ ಗನ್ ನಿಂದ ಬಂದೂಕು ತರಬೇತಿ; ವಿವಾದಕ್ಕೀಡಾದ ಶೌರ್ಯ ಶಿಬಿರ ಕಾರ್ಯಕ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶಾಲೆಯಲ್ಲಿ ಸಂಘಪರಿವಾರದಿಂದ ತ್ರಿಶೂಲ ದೀಕ್ಷೆ, ಏರ್ ಗನ್ ನಿಂದ ಬಂದೂಕು ತರಬೇತಿ; ವಿವಾದಕ್ಕೀಡಾದ ಶೌರ್ಯ ಶಿಬಿರ ಕಾರ್ಯಕ್ರಮ

ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಖಾಸಗಿ ಶಾಲೆಯೊಂದರಲ್ಲಿ ಇತ್ತೀಚೆಗೆ ಸಂಘಪರಿವಾರ, ಭಜರಂಗದಳದಿಂದ ಏರ್ಪಡಿಸಲಾಗಿದ್ದ ಶೌರ್ಯ ಶಿಬಿರ ಕಾರ್ಯಕ್ರಮ ತೀವ್ರ ವಿವಾದಕ್ಕೀಡಾಗಿದ್ದು, ಶಿಬಿರದಲ್ಲಿ ಕಾರ್ಯಕರ್ತರಿಗೆ ಬಂದೂಕು ತರಬೇತಿ, ತ್ರಿಶೂಲ ದೀಕ್ಷೆ ನೀಡಲಾಗಿದೆ.

ಶ್ರೀಸಾಯಿ ಶಂಕರ ವಿದ್ಯಾಮಂದಿರದಲ್ಲಿ ಶೌರ್ಯ ಪ್ರಶಿಕ್ಷಣವರ್ಗ ಶಿಬಿರ ಎಂಬ ತರಬೇತಿ ಕಾರ್ಯಕ್ರಮ ನಡೆಸಲಾಗಿದ್ದು, ಈ ವೇಳೆ 50ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಶಾಲೆಯಲ್ಲಿ ತ್ರಿಶೂಲ ದೀಕ್ಷೆ, ಏರ್ ರೈಫಲ್ ಮೂಲಕ ಬಂದೂಕು ತರಬೇತಿ ನೀಡಲಾಗಿದೆ.

BIG BREAKING: ಚಾರ್ ಧಾಮ್ ಯಾತ್ರೆ; 39 ಯಾತ್ರಿಕರು ಹೃದಯಾಘಾತದಿಂದಲೇ ಸಾವು ?

ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಫೋಟೋಗಳು ವೈರಲ್ ಆಗಿದ್ದು, ಇಂತಹ ಶಿಬಿರಗಳಿಗೆ ಕೊಡಗು ಜಿಲ್ಲಾಡಳಿತ ಅವಕಾಶ ನೀಡಿದ್ದಾದರೂ ಹೇಗೆ ಎಂದು ಎಸ್ ಡಿ ಪಿ ಐ ಸಂಘಟನೆ ಪ್ರಶ್ನಿಸಿದೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಸಂಘರ್ಷಗಳ ನಡುವೆ ಭಜರಂಗದಳ, ಸಂಘಪರಿವಾರದಿಂದ ಇಂತಹ ಶಸ್ತ್ರಾಸ್ತ್ರ ತರಬೇತಿ ಶಿಬಿರ ಆಯೋಜಿಸುವ ಮೂಲಕ ಸಮಾಜದಲ್ಲಿನ ಶಾಂತಿ ವಾತಾವರಣ ಕದಡುವ ಪ್ರಚೋದನೆ ನೀಡಲಾಗುತ್ತಿದೆ. ಯುವಕರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ ಎಂದು ಕಿಡಿಕಾರಿದೆ.

ಆದರೆ ಭಜರಂಗದಳ ಕಾರ್ಯಕರ್ತರು ಈ ತರಬೇತಿ ಶಿಬಿರಗಳನ್ನು ಸಮರ್ಥಿಸಿಕೊಂಡಿದ್ದು, ರಕ್ಷಣೆಗಾಗಿ ಆಯುಧಗಳನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಸಲಾಗಿದೆ ಎಂದು ಹೇಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...