alex Certify BIG NEWS: ವೀರ ಸಾವರ್ಕರ್ ಓರ್ವ ನಾಸ್ತಿಕ; ದೇವರ ಜತೆ ಅವರ ಫೋಟೋ ಇಡುವುದು ಹಾಸ್ಯಾಸ್ಪದ; ಬಿ.ಕೆ. ಹರಿಪ್ರಸಾದ್ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವೀರ ಸಾವರ್ಕರ್ ಓರ್ವ ನಾಸ್ತಿಕ; ದೇವರ ಜತೆ ಅವರ ಫೋಟೋ ಇಡುವುದು ಹಾಸ್ಯಾಸ್ಪದ; ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರು: ಗಣೇಶೋತ್ಸವದ ಸಂದರ್ಭದಲ್ಲಿ ಬಿಜೆಪಿ ನಡೆಸುತ್ತಿರುವ ವೀರ ಸಾವರ್ಕರ್ ರಥಯಾತ್ರೆಗೆ ಕಾಂಗ್ರೆಸ್ ಕಿಡಿಕಾರಿದ್ದು, ಸಾವರ್ಕರ್ ಓರ್ವ ನಾಸ್ತಿಕ. ದೇವರ ಜತೆ ಅವರ ಫೋಟೋ ಇಡುವುದು ಹಾಸ್ಯಾಸ್ಪದ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್, ವೀರ ಸಾವರ್ಕರ್ ಗೆ ದೇವರ ಬಗ್ಗೆ ನಂಬಿಕೆ ಇರಲಿಲ್ಲ. ದೇವರ ಜತೆ ಅವರ ಫೋಟೋ ಇಡುವುದು ಸರಿಯಲ್ಲ. ಗಣೇಶನ ಜತೆ ನಾಸ್ತಿಕನ ಫೋಟೋ ಇಡುವುದು ಎಷ್ಟು ಸರಿ ? ಎಂದು ಪ್ರಶ್ನಿಸಿದರು.

ಜಿನ್ನಾ ಜತೆ ಸೇರಿ ದೇಶವನ್ನು ಒಡೆದವರು ಅವರು, ಸಾವರ್ಕರ್, ಜಿನ್ನಾ ಅವರೆಲ್ಲರೂ ನಾಸ್ತಿಕರು. ಇಂದು ದೇಶ ಈ ಸ್ಥಿತಿಗೆ ಬರಲು ಅವರೇ ಕಾರಣ ಎಂದು ಕಿಡಿಕಾರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...