alex Certify BIG NEWS: ವಾಜಪೇಯಿ ಕುಡಿಯುತ್ತಿದ್ದರಂತೆ…ತಪ್ಪಾ….?; ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಾಜಪೇಯಿ ಕುಡಿಯುತ್ತಿದ್ದರಂತೆ…ತಪ್ಪಾ….?; ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕಲಬುರ್ಗಿ: ಕಾಂಗ್ರೆಸ್ ನವರು ನೆಹರು ಹೆಸರಲ್ಲಿ ಹುಕ್ಕಾ ಬಾರ್ ತೆರೆಯಲಿ ಎಂಬ ಸಿ.ಟಿ.ರವಿ ಹೇಳಿಕೆಗೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದು, ವಾಜಪೇಯಿ ಕುಡಿಯುತ್ತಿದ್ದರಂತೆ ಈ ಬಗ್ಗೆ ಕೆಲ ವರದಿ ಕೂಡ ಬಂದಿತ್ತು ಎಂದು ಹೇಳುವ ಮೂಲಕ ವಾಕ್ಸಮರ ಮುಂದುವರೆಸಿದ್ದಾರೆ.

ಕಲಬುರ್ಗಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ನೆಹರು ಹುಕ್ಕಾ ಸೇದುತ್ತಿರುವ ಬಗ್ಗೆ ನೂರಾರು ಫೋಟೋಗಳು ಇವೆ ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಸ್ವತಃ ವಾಜಪೇಯಿಯವರು ಕುಡಿಯುತ್ತಿದ್ದರಂತೆ… ತಪ್ಪಾ? ಈ ಬಗ್ಗೆ ಯಾವುದೋ ಪತ್ರಿಕೆಯಲ್ಲಿ ವರದಿ ಕೂಡ ಬಂದಿತ್ತು. ವಾಜಪೇಯಿ ಹೆವಿ ಡ್ರಿಂಕರ್ ಅವರಿಗೆ ಪ್ರತಿದಿನ ಕುಡಿತವಿರಲೇಬೇಕು ಎಂದು… ಹಾಗಂತ ಅದು ತಪ್ಪಾ? ಯಾರೋ ಸಿಗರೇಟ್ ಸೇದಿದ ಮಾತ್ರಕ್ಕೆ, ಕುಡಿದ ಮಾತ್ರಕ್ಕೆ ನಾವು ಮಾತನಾಡುವುದು ಸರಿಯಲ್ಲ ಎಂದರು.

ಲಕ್ಷಾಧಿಪತಿಯಾಗ್ಬೇಕಾ…..? ಹಾಗಿದ್ರೆ ಶುರು ಮಾಡಿ ಈ ವ್ಯವಹಾರ

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಷ್ಟು ವರ್ಷವಾದರೂ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಅದರ ಬಗ್ಗೆ ಮಾತನಾಡುವುದನ್ನು ಬಿಟ್ಟು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಿ.ಟಿ.ರವಿ ಯಾವುದೋ ನಿರಾಸೆಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಅವರು ಹೇಳುವುದರಿಂದ ನೆಹರು ಘನತೆ ಕಡಿಮೆಯಾಗಲ್ಲ ಅಥವಾ ನಾವು ಹೀಗೆ ಹೇಳುವುದರಿಂದ ವಾಜಪೇಯಿ ಘನತೆ ಕುಗ್ಗಲ್ಲ. ಆದರೆ ಬಾಯಿಗೆ ಬಂದಂತೆ ಮಾತನಾಡುವ ಅಗತ್ಯವಿಲ್ಲ. ಜನಪರ, ಅಭಿವೃದ್ಧಿ ಕೆಲಸ ಹೀಗೆ ಮಾಡಬೇಕಾದ ಕೆಲಸದ ಬಗ್ಗೆ ಗಮನವಿರಬೇಕೆ ಹೊರತು ಇಂತಹ ಹೇಳಿಕೆಗಳನ್ನು ನೀಡುತ್ತಾ ಜನರ ಗಮನ ಬೇರೆಡೆ ಸೆಳೆಯುವುದು ಸರಿಯಲ್ಲ ಎಂದು ಸಲಹೆ ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...