alex Certify BIG NEWS: ಮುಷ್ಕರಕ್ಕೆ ಮುಂದಾದ 108 ಆಂಬುಲೆನ್ಸ್ ಚಾಲಕರು; ಸರ್ಕಾರಕ್ಕೆ ಒಂದು ದಿನದ ಡೆಡ್ ಲೈನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮುಷ್ಕರಕ್ಕೆ ಮುಂದಾದ 108 ಆಂಬುಲೆನ್ಸ್ ಚಾಲಕರು; ಸರ್ಕಾರಕ್ಕೆ ಒಂದು ದಿನದ ಡೆಡ್ ಲೈನ್

ಬೆಂಗಳೂರು : ಕಳೆದ ಎರಡು ತಿಂಗಳಿಂದ ಸಂಬಳ ಪಾವತಿಯಾಗದ ಹಿನ್ನೆಲೆಯಲ್ಲಿ 108 ಆಂಬುಲೆನ್ಸ್ ಚಾಲಕರು ಮುಷ್ಕರಕ್ಕೆ ಮುಂದಾಗಿದ್ದು ರಾಜ್ಯ ಸರ್ಕಾರಕ್ಕೆ ಒಂದು ದಿನದ ಗಡುವು ನೀಡಿದ್ದಾರೆ.

ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆಯಲ್ಲಿ ಮತ್ತೆ ವ್ಯತ್ಯಯವಾಗುವ ಸಾಧ್ಯತೆ ದಟ್ಟವಾಗಿದೆ. ಎರಡು ತಿಂಗಳಿಂದ ಆಂಬುಲೆನ್ಸ್ ಚಾಲಕರಿಗೆ ವೇತನ ನೀಡದ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ನಿರ್ಧರಿಸಿರುವ ಚಾಲಕರು ರಜೆಯ ಮೇಲೆ ತೆರಳುವುದಾಗಿ ಹೇಳಿದ್ದಾರೆ.

ಸರ್ಕಾರಕ್ಕೆ ಒಂದು ದಿನದ ಗಡುವು ನೀಡಿರುವ ಆಂಬುಲೆನ್ಸ್ ಚಾಲಕರು ನಾಳೆಯೊಳಗಾಗಿ ಸಂಬಳ ನೀಡುವಂತೆ ತಿಳಿಸಿದ್ದಾರೆ. ದಸರಾ ರಜೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಒಂದು ದಿನದ ಕಾಲಾವಕಾಶ ಕೆಳಿದ್ದು, ನಾಳೆ ಬೆಳಿಗ್ಗೆ 11ಗಂಟೆಗೆ ಚಾಲಕರ ಸಂಬಳ ವಿಚಾರವಾಗಿ ಸಭೆ ನಡೆಸುವುದಾಗಿ ತಿಳಿಸಿದೆ. ಒಂದುವೇಳೆ ನಾಳೆ ಸಂಬಳ ಪಾವತಿಯಾಗದಿದ್ದಲ್ಲಿ ಆಂಬುಲೆನ್ಸ್ ಚಾಲಕರು ಪ್ರತಿಭಟನೆಗೆ ಮುಂದಾಗಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...