alex Certify BIG NEWS: ಬೆಂಕಿ ಹಚ್ಚಿದವರ ಹಿಂದಿನ ಸೂತ್ರಧಾರಿ ಬೇರೆ ಇದ್ದಾರೆ; ಶಾಸಕ ಸತೀಶ್ ರೆಡ್ಡಿ ಸ್ಫೋಟಕ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಂಕಿ ಹಚ್ಚಿದವರ ಹಿಂದಿನ ಸೂತ್ರಧಾರಿ ಬೇರೆ ಇದ್ದಾರೆ; ಶಾಸಕ ಸತೀಶ್ ರೆಡ್ಡಿ ಸ್ಫೋಟಕ ಹೇಳಿಕೆ

ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಅವರ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ಪೊಲಿಸರು ಬಂಧಿಸಿದ್ದು, ಆದರೆ ಪ್ರಕರಣದ ಸೂತ್ರಧಾರಿ ಬೇರೆಯೆ ಇದ್ದಾರೆ ಎಂದು ಶಾಸಕ ಸತೀಶ್ ರೆಡ್ಡಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ರೆಡ್ಡಿ, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯೊಬ್ಬ ಕೆಲಸಕ್ಕಾಗಿ ಹಲವು ಭಾರಿ ಭೇಟಿಯಾಗಲು ಯತ್ನಿಸಿದ್ದೆ. ಆದರೂ ಅವಕಾಶ ನೀಡಿಲ್ಲ. ಹಾಗಾಗಿ ಕಾರಿಗೆ ಬೆಂಕಿ ಹಚ್ಚಿದ್ದೆ. ದೊಡ್ಡ ವ್ಯಕ್ತಿಯ ಕಾರಿಗೆ ಬೆಂಕಿ ಹಚ್ಚಿದರೆ ಭಯ ಹುಟ್ಟಿಸಬಹುದು ಎಂದು ಕೃತ್ಯವೆಸಗಿದ್ದಾಗಿ ಓರ್ವ ಹೇಳಿದ್ದಾನೆ ಎಂಬ ಮಾಹಿತಿ ಇದೆ. ಆದರೆ ಬಂಧಿತ ಆರೋಪಿಗಳು ಹೇಳುತ್ತಿರುವುದನ್ನು ಒಪ್ಪಲಾಗದು. ಇವರು ಕೇವಲ ಪಾತ್ರಧಾರಿಗಳಷ್ಟೇ. ಇವರ ಹಿಂದಿನ ಸೂತ್ರಧಾರಿ ಬೇರೆಯೇ ಇದ್ದಾರೆ ಎಂದು ಹೇಳಿದರು.

ತೂಕ ಹೆಚ್ಚಿಸಿಕೊಳ್ಳಲು ಬಯಸುವವರು ತಪ್ಪದೆ ಸೇವಿಸಿ ಈ ‘ಆಹಾರ’

ಬಂಧಿತರಲ್ಲಿ ಓರ್ವ ಕುಡುಕ, ಇನ್ನೋರ್ವ ಡ್ರಗ್ ಎಡಿಕ್ಟ್. ಹಗಲಲ್ಲಿ ನನ್ನನ್ನು ಭೇಟಿಗೆ ಬರದೇ ರಾತ್ರಿ ವೇಳೆ ಒಂಟಿಯಾಗಿ ನನ್ನನ್ನು ಭೇಟಿಯಾಗಲು ಯತ್ನಿಸಿದ್ದಾರೆ ಎಂಬುದರ ಹಿಂದೆ ಅವರ ದುರುದ್ದೇಶವಿದೆ ಎಂಬುದು ಸ್ಪಷ್ಟ. ಕೇಬಲ್ ಮಾಫಿಯಾ ಕೈವಾಡದ ಬಗ್ಗೆಯೂ ಶಂಕೆ ಇದೆ. ನನಗೆ ಕೆಲವೊಂದು ಮಾಹಿತಿ ಸಿಕ್ಕಿದೆ. ಇದನ್ನು ನಾನು ಬಹಿರಂಗಪಡಿಸಲಾಗಲ್ಲ ಈ ಬಗ್ಗೆ ಗೃಹ ಸಚಿವರಿಗೆ ನೇರವಾಗಿ ತಿಳಿಸುತ್ತೇನೆ. ಪ್ರಕರಣದ ತನಿಖೆ ನಡೆಯುತ್ತಿದೆ. ಪೊಲೀಸರ ತನಿಖೆ ಬಳಿಕ ಎಲ್ಲಾ ವಿಚಾರ ಹೊರಬರಲಿದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...