alex Certify BIG NEWS: ಬಿಜೆಪಿ ವಲಸಿಗರ ವಿರುದ್ಧ ಹೊಸ ಬಾಂಬ್ ಸಿಡಿಸಿದ ಕೆ.ಎಸ್. ಈಶ್ವರಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿಜೆಪಿ ವಲಸಿಗರ ವಿರುದ್ಧ ಹೊಸ ಬಾಂಬ್ ಸಿಡಿಸಿದ ಕೆ.ಎಸ್. ಈಶ್ವರಪ್ಪ


ಹುಬ್ಬಳ್ಳಿ: ಬಿಜೆಪಿಗೆ ಬಂದಿದ್ದ ವಲಸಿಗರ ವಿರುದ್ಧ ಮಾಜಿ ಸಚಿವ ಕೆ.ಎಸ್.  ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ಕಾಂಗ್ರೆಸ್ ನ ಗಾಳಿ ನಮ್ಮ ಮೇಲೂ ಬೀಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ಕಾಂಗ್ರೆಸ್ ನವರ ಆಗಮನದಿಂದಾಗಿ ಬಿಜೆಪಿಯಲ್ಲಿ ಶಿಸ್ತು ಕಡಿಮೆಯಾಗಿದೆ. ನಾವೇ ಕರ್ಕೊಂಡು ಬಂದಿದ್ರಿಂದ ಅನುಭವಿಸುತ್ತಿದ್ದೇವೆ. ನಾವು ನಾಲ್ಕು ಜನ ಇದ್ದಾಗ ಪಕ್ಷದಲ್ಲಿ ಬಹಳ ಶಿಸ್ತು ಇತ್ತು. ಕಾಂಗ್ರೆಸ್ ನ ಗಾಳಿ ನಮ್ಮ ಮೇಲು ಬೀಸಿದ್ದರಿಂದ ಈಗ ಆ ಶಿಸ್ತು ಇಲ್ಲ ಎಂದು ಗರಂ ಆದರು.

ಆಟ ಆಡ್ಲಿ ಅಂತ ಬಿಟ್ಟಿದ್ದಾರೆ, ನಮ್ಮ ಹೈಕಮಾಂಡ್ ಬಾಲ ಕಟ್ ಮಾಡುತ್ತೆ. ಯಾವಾಗ ಬಾಲ ಕಟ್ ಮಾಡ್ತಾರೆ ಗೊತ್ತಿಲ್ಲ ಎಂದು ಹೇಳುವ ಮೂಲಕ ಬಾಂಬೆ ಬಾಯ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...