alex Certify BIG NEWS: ಬಿಜೆಪಿ ರಾಷ್ಟ್ರಾಧ್ಯಕ್ಷರ ಕಾರ್ ಮೇಲೆ ದಾಳಿ; ಬುಲೆಟ್ ಪ್ರೂಫ್ ನಿಂದ ಬಚಾವ್ ಆಗಿದ್ದೇನೆ ಎಂದ ಜೆ.ಪಿ ನಡ್ಡಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿಜೆಪಿ ರಾಷ್ಟ್ರಾಧ್ಯಕ್ಷರ ಕಾರ್ ಮೇಲೆ ದಾಳಿ; ಬುಲೆಟ್ ಪ್ರೂಫ್ ನಿಂದ ಬಚಾವ್ ಆಗಿದ್ದೇನೆ ಎಂದ ಜೆ.ಪಿ ನಡ್ಡಾ

ವ್ಯಕ್ತಿಗಿಂತ ಪಕ್ಷ ದೊಡ್ಡದು-ಜೆ.ಪಿ.ನಡ್ಡಾ · ವಾರ್ತಾ ಮಿತ್ರ

ಕೋಲ್ಕತ್ತಾ: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರ ಕಾರು ಹಾಗೂ ಬೆಂಗಾವಲು ಪಡೆ ವಾಹನಗಳ ಮೇಲೆ ದಾಳಿ ನಡೆಸಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರಕ್ಕೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಕಲ್ಲು, ಇಟ್ಟಿಗೆ ಹಾಗೂ ಬಾಟಲ್ ಗಳನ್ನು ಎಸೆದಿದ್ದಾರೆ. ಘಟನೆಯಲ್ಲಿ 15 ವಾಹನಗಳು ಜಖಂ ಗೊಂಡಿವೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಕುರಿತು ಮಾತನಾಡಿರುವ ಜೆ.ಪಿ ನಡ್ಡಾ, ನಾನು ಬುಲೆಟ್ ಪ್ರೂಫ್ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದರಿಂದ ಸುರಕ್ಷಿತವಾಗಿದ್ದೇನೆ. ಕಲ್ಲು ತೂರಾಟದಿಂದ ಪಕ್ಷದ ನಾಯಕರಾದ ಮುಕುಲ್ ರಾಯ್ ಹಾಗೂ ಕೈಲಾಶ್ ವಿಜಯವರ್ಗಿಯಾ ಅವರಿಗೆ ಗಾಯಗಳಾಗಿವೆ ಎಂದು ತಿಳಿಸಿದರು.

ಇದು ಪ್ರಜಾಪ್ರಭುತ್ವಕ್ಕೆ ಮುಜುಗರ ತರುವ ಘಟನೆ. ಪಶ್ಚಿಮ ಬಂಗಾಳದಲ್ಲಿ ಈ ಅರಾಜಕತೆ ಅಸಹಿಷ್ಣತೆ ಕೊನೆಯಾಗಬೇಕು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...