alex Certify BIG NEWS: ಬಂಧಿತ ಸಂಪತ್‌ ನಿಂದ ಸ್ಪೋಟಕ ಹೇಳಿಕೆ; ನಾನು ಕಾಂಗ್ರೆಸ್‌ ಕಾರ್ಯಕರ್ತನಾಗಿದ್ದರೂ ಸಿದ್ದು ಹೇಳಿಕೆಯಿಂದ ನೋವು; ಹಾಗಾಗಿಯೇ ಮೊಟ್ಟೆ ಎಸೆದೆ ಎಂದು ತಪ್ಪೊಪ್ಪಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಂಧಿತ ಸಂಪತ್‌ ನಿಂದ ಸ್ಪೋಟಕ ಹೇಳಿಕೆ; ನಾನು ಕಾಂಗ್ರೆಸ್‌ ಕಾರ್ಯಕರ್ತನಾಗಿದ್ದರೂ ಸಿದ್ದು ಹೇಳಿಕೆಯಿಂದ ನೋವು; ಹಾಗಾಗಿಯೇ ಮೊಟ್ಟೆ ಎಸೆದೆ ಎಂದು ತಪ್ಪೊಪ್ಪಿಗೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈಗ ಬಂಧಿತನಾಗಿರುವ ಕೊಡಗು ಜಿಲ್ಲೆ ಸೋಮವಾರ ಪೇಟೆಯ ಸಂಪತ್‌ ಸ್ಪೋಟಕ ಹೇಳಿಕೆ ನೀಡಿದ್ದಾನೆ.

ನಾನು ಮೊದಲು ಜೆಡಿಎಸ್‌ ನಲ್ಲಿದ್ದೆ. ಈಗ ಕಾಂಗ್ರೆಸ್‌ ನೊಂದಿಗೆ ಗುರುತಿಸಿಕೊಂಡಿದ್ದು, ಹಿಂದೂಗಳು ಗೋಮಾಂಸ ಸೇವಿಸುತ್ತಾರೆಂಬ ಸಿದ್ದರಾಮಯ್ಯನವರ ಹೇಳಿಕೆ ನೋವು ತಂದಿತ್ತು. ಹೀಗಾಗಿ ಮೊಟ್ಟೆ ಎಸೆದೆ ಎಂದಿದ್ದಾನೆ.

ಅಲ್ಲದೇ ಟಿಪ್ಪುವನ್ನು ಸಿದ್ದರಾಮಯ್ಯನವರು ಹೊಗಳಿದ್ದು ಸಹ ಕೊಡವನಾದ ನನಗೆ ಸಿಟ್ಟು ತರಿಸಿತ್ತು ಎಂದು ಹೇಳಿದ್ದಾನೆ.

ಪೊಲೀಸರು ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದು, ಬಳಿಕವಷ್ಟೇ ಸತ್ಯಾಂಶ ಬಯಲಾಗಬೇಕಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...