alex Certify BIG NEWS: ಫ್ಲೆಕ್ಸ್ ವಿವಾದದ ಮಧ್ಯೆ ಮತ್ತೊಂದು ಕಿಚ್ಚು; ಮಧುಗಿರಿಯಲ್ಲಿ ರಾರಾಜಿಸಿದ ನಾಥುರಾಮ್ ಗೋಡ್ಸೆ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಫ್ಲೆಕ್ಸ್ ವಿವಾದದ ಮಧ್ಯೆ ಮತ್ತೊಂದು ಕಿಚ್ಚು; ಮಧುಗಿರಿಯಲ್ಲಿ ರಾರಾಜಿಸಿದ ನಾಥುರಾಮ್ ಗೋಡ್ಸೆ ಫೋಟೋ

ಶಿವಮೊಗ್ಗದಲ್ಲಿ ಸಾವರ್ಕರ್ ಅವರ ಫ್ಲೆಕ್ಸ್ ತೆರವುಗೊಳಿಸಿದ ವಿಚಾರ ಘರ್ಷಣೆಗೆ ಕಾರಣವಾಗಿದ್ದು, ಇದೀಗ ಪರಿಸ್ಥಿತಿ ತಿಳಿಗೊಳಿಸಲು ಶಿವಮೊಗ್ಗ ಹಾಗೂ ಭದ್ರಾವತಿ ನಗರಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಇದರ ಮಧ್ಯೆ ಇದೀಗ ಮತ್ತೊಂದು ಘಟನೆ ನಡೆದಿದ್ದು, ತುಮಕೂರಿನ ಮಧುಗಿರಿಯ ದಂಡಿನ ಮಾರಮ್ಮ ಬಳಿ ಕೆಲವರು ಹಾಕಿರುವ ಫ್ಲೆಕ್ಸ್ ನಲ್ಲಿ ಮಹಾತ್ಮ ಗಾಂಧೀಜಿಯವರ ಹತ್ಯೆ ಮಾಡಿದ್ದ ನಾಥುರಾಮ್ ಗೋಡ್ಸೆ ಭಾವಚಿತ್ರ ರಾರಾಜಿಸುತ್ತಿದೆ.

ಮೊದಲೇ ಹಾಕಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವಿರುವ ಫ್ಲೆಕ್ಸ್‌ ನಲ್ಲಿ ನಾಥುರಾಮ್‌ ಗೋಡ್ಸೆ ಫೋಟೋ ಸೇರಿಸಲಾಗಿದೆ. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಪೊಲೀಸರು ಅದನ್ನು ತೆರವುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...