alex Certify BIG NEWS: ಫ್ರೀ ಗಣೇಶನಿಗಾಗಿ ಮುಗಿಬಿದ್ದ ಜನರು; ನೂಕು ನುಗ್ಗಲು; ಜನರನ್ನು ನಿಯಂತ್ರಿಸಲು ಹರಸಾಹಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಫ್ರೀ ಗಣೇಶನಿಗಾಗಿ ಮುಗಿಬಿದ್ದ ಜನರು; ನೂಕು ನುಗ್ಗಲು; ಜನರನ್ನು ನಿಯಂತ್ರಿಸಲು ಹರಸಾಹಸ

ಮಂಡ್ಯ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಮಂಡ್ಯದ ಪಾಂಡವಪುರದಲ್ಲಿ ಗಣೇಶ ಮೂರ್ತಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಫ್ರೀ ಗಣೇಶನಿಗಾಗಿ ಜನರು ಮುಗಿಬಿದ್ದ ಘಟನೆ ನಡೆದಿದೆ.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಟಿಕೆಟ್ ಆಕಾಂಕ್ಷಿಗಳು ಮತದಾರರನ್ನು ತಮ್ಮತ್ತ ಸೆಳೆಯಲು ಇಂತಹ ವಿನೂತನ ಪ್ರಯತ್ನ ಮಾಡಿದ್ದು, ಗಣೇಶ ಮೂರ್ತಿಯನ್ನು ಉಚಿತವಾಗಿ ಹಂಚುತ್ತಿದ್ದಾರೆ.

ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಇಂದ್ರೇಶ್ ಗಣೇಶನ ಮೂರ್ತಿಯನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ. ಫ್ರೀಯಾಗಿ ಗಣೇಶ ಮೂರ್ತಿ ಪಡೆಯಲು ಸಾಗರೋಪಾದಿಯಲ್ಲಿ ಜನರು ಆಗಮಿಸುತ್ತಿದ್ದು, ನೂಕು ನುಗ್ಗಲು ಉಂಟಾಗಿದೆ.

ಈ ಬಾರಿ ಗಣೇಶ ಚತುರ್ಥಿಯಂದು ಉಚಿತವಾಗಿ ಗಣೇಶ ಮೂರ್ತಿ ಹಂಚುವುದಾಗಿ ಹತ್ತು ದಿನಗಳ ಹಿಂದೆ ಡಾ.ಇಂದ್ರೇಶ್ ಘೋಷಿಸಿದ್ದರು. ಅಲ್ಲದೇ ಗಣೇಶ ಮೂರ್ತಿ ಪಡೆಯಲು ನೋಂದಣಿ ಮಾಡಿಕೊಳ್ಳುವಂತೆಯೂ ಕರೆ ನೀಡಿದ್ದರು. ಇದೀಗ ಗಣೇಶ ಮೂರ್ತಿಗಾಗಿ ಜನರು ಮುಗಿಬಿದ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...