alex Certify BIG NEWS: ಪ್ರೇಮಿಗಳಿಬ್ಬರು ನಾಪತ್ತೆ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪ್ರೇಮಿಗಳಿಬ್ಬರು ನಾಪತ್ತೆ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್

ಬಾಗಲಕೋಟೆ: ಬಾಗಲಕೋಟೆಯ ಪ್ರೇಮಿಗಳಿಬ್ಬರ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಕುಟುಂಬದವರೇ ಯುವಕ ಹಾಗೂ ಯುವತಿ ಇಬ್ಬರನ್ನೂ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

22 ವರ್ಷದ ವಿಶ್ವನಾಥ ನೆಲಗಿ ಹಾಗೂ 17 ವರ್ಷದ ರಾಜೇಶ್ವರಿ ಕರಡಿ ಮೃತ ಪ್ರೇಮಿಗಳು. ಮಗಳ ಪ್ರೀತಿಗೆ ವಿರೋಧಿಸಿ ಕುಟುಂಬಸ್ಥರೇ ಇಬ್ಬರನ್ನು ಕೊಲೆಗೈದಿದ್ದಾಗಿ ತಿಳಿದು ಬಂದಿದ್ದು, ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ.

ರವಿ ಹಲ್ಲಣ್ಣವರ್, ಹನುಮಂತ, ಭೀರಪ್ಪ ದಳವಾಯಿ ಬಂಧಿತ ಆರೋಪಿಗಳು. ಯುವತಿ ಹಾಗೂ ಯುವಕ ಇಬ್ಬರನ್ನು ಒಂದು ಮಾಡಿ ಮದುವೆ ಮಾಡಿಸುವುದಾಗಿ ಇಬ್ಬರನ್ನೂ ನಂಬಿಸಿ ಕರೆದೊಯ್ದ ಸಹೋದರ ಹಾಗೂ ಮಾವಂದಿರು, ವೇಲ್ ನಿಂದ ಕತ್ತು ಬಿಗಿದು ರಾಜೇಶ್ವರಿಯನ್ನು ಹತ್ಯೆ ಮಾಡಿದ್ದರು. ಬಳಿಕ ಯುವಕ ವಿಶ್ವನಾಥನಿಗೆ ಮರ್ಮಾಂಗ ಮತ್ತು ಎದೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದರು.

ಟಾಟಾ ಏಸ್ ಹಾಗೂ ಬುಲೆರೋ ವಾಹನದಲಿಯೇ ಇಬ್ಬರನ್ನು ಹತ್ಯೆಗೈದ ಕಿರಾತಕರು ಬಳಿಕ ಶವಗಳನ್ನು ಕೃಷ್ಣಾ ನದಿಗೆ ಎಸೆದಿದ್ದರು. ಅ.11ರಂದು ತನ್ನ ಮಗಳು ಕಿಡ್ನ್ಯಾಪ್ ಆಗಿದ್ದಾಳೆ ಎಂದು ರಾಜೇಶ್ವರಿ ಅಪ್ಪ ಪರಸಪ್ಪ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ವಿಶ್ವನಾಥ್ ಕೂಡ ಕಾಣೆಯಾಗಿದ್ದಾಗಿ ಆತನ ತಂದೆ ಗದಗ ಜಿಲ್ಲೆ ನರಗುಂದ ಠಾಣೆಯಲ್ಲಿ ದೂರು ನೀಡಿದ್ದರು. ರವಿ ಎಂಬಾತನನ್ನು ಅನುಮಾನದಿಂದ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಕುಟುಂಬದವರೇ ಪ್ರೇಮಿಗಳಿಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...