alex Certify BIG NEWS: ತಾರಕಕ್ಕೇರಿದ KRS ಕದನ; ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಖುದ್ದು ಭೇಟಿಗೆ ಮುಂದಾದ ಸುಮಲತಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತಾರಕಕ್ಕೇರಿದ KRS ಕದನ; ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಖುದ್ದು ಭೇಟಿಗೆ ಮುಂದಾದ ಸುಮಲತಾ

ಬೆಂಗಳೂರು: ಕೆ.ಆರ್.ಎಸ್.ಡ್ಯಾಂ ನಲ್ಲಿ ಬಿರುಕು ಹೇಳಿಕೆ ವಿವಾದ ಭುಗಿಲೆದ್ದಿದ್ದು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ ವಾಕ್ಸಮರ ತಾರಕಕ್ಕೇರಿರುವ ಬೆನ್ನಲ್ಲೇ ಇದೀಗ ಕೆ.ಆರ್.ಎಸ್. ಡ್ಯಾಂ ಸುತ್ತಮುತ್ತಲಿನ ಗಣಿಗಾರಿಕೆ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲು ಸುಮಲತಾ ಮುಂದಾಗಿದ್ದಾರೆ.

ಕೆ.ಆರ್.ಎಸ್.ಡ್ಯಾಂ ನಲ್ಲಿ ಯಾವುದೇ ಬಿರುಕು ಬಿಟ್ಟಿಲ್ಲ ಎಂದು ಗಣಿ ಸಚಿವರು ಹೇಳಿಕೆ ನೀಡಿದ್ದ ಬೆನ್ನಲ್ಲೇ ಇದೀಗ ಕಾವೇರಿ ನೀರಾವರಿ ನಿಗಮ ಕೂಡ ಡ್ಯಾಂ ನಲ್ಲಿ ಬಿರುಕು ಬಿಟ್ಟಿಲ್ಲ ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿತ್ತು. ಈ ಬೆಳವಣಿಗೆ ನಡುವೆಯೇ ಈಗ ಸಂಸದೆ ಸುಮಲತಾ ಖುದ್ದು ಪರಿಶೀಲನೆಗೆ ಮುಂದಾಗಿದ್ದಾರೆ.

‌ʼಕೊರೊನಾʼ ಲಸಿಕೆ ಪಡೆಯುವವರಿಗೆ ಮತ್ತೊಂದು ಗುಡ್‌ ನ್ಯೂಸ್

ನಾಳೆ ಅಕ್ರಮ ಗಣಿಗಾರಿಕೆ ನಡೆಯುವ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು, ಕೆ.ಆರ್.ಎಸ್. ಸುತ್ತಮುತ್ತಲ ಪ್ರದೇಶ, ಬೇಬಿ ಬೆಟ್ಟ, ಚೆನ್ನಕೆರೆ, ಹಂಗರಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...