alex Certify BIG NEWS: ತಂಗಿ ಚುಡಾಯಿಸಿದ್ದಕ್ಕೆ ಯುವಕನನ್ನು 50 ಬಾರಿ ಇರಿದು ಬರ್ಬರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತಂಗಿ ಚುಡಾಯಿಸಿದ್ದಕ್ಕೆ ಯುವಕನನ್ನು 50 ಬಾರಿ ಇರಿದು ಬರ್ಬರ ಹತ್ಯೆ

ಚಿಕ್ಕಬಳ್ಳಾಪುರ: ತಂಗಿಯನ್ನು ಚುಡಾಯಿಸಿದ್ದಕ್ಕೆ ಯುವಕನೊಬ್ಬನನ್ನು 50ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಚಿಕ್ಕಬಳ್ಳಾಪುರದ ಹಾರೋಬಂಡೆ ಬಳಿ ನಡೆದಿದೆ.

ಕೋಟೆ ಬಡಾವಣೆಯ ನಿವಾಸಿ ನಂದನ್ ಮೃತ ಯುವಕ. ದರ್ಶನ್ ಹಾಗೂ ಆತನ ಸ್ನೇಹಿತ ಆಶ್ರಯ್ ಎಂಬುವವರು ನಂದನ್ ನನ್ನು ಇರಿದು ಹತ್ಯೆಗೈದಿದ್ದಾರೆ. ನಂದನ್, ದರ್ಶನ್ ತಂಗಿಯನ್ನು ಚುಡಾಯಿಸಿದ್ದ. ಹಲವು ಬಾರಿ ದರ್ಶನ್ ನಂದನ್ ಗೆ ಬುದ್ಧಿವಾದ ಹೇಳಿದ್ದ. ಅಲ್ಲದೇ ವಾರ್ನಿಂಗ್ ಕೂಡ ಮಾಡಿದ್ದ. ಆದರೂ ಕೇಳದೇ ನಂದನ್ ದರ್ಶನ್ ತಂಗಿಗೆ ಚುಡಾಯಿಸಿದ್ದ.

ಇದರಿಂದ ಕೋಪಗೊಂಡ ದರ್ಶನ್ ತನ್ನ ಸ್ನೇಹಿತ ಆಶ್ರಯ್ ಜೊತೆ ಸೇರಿ ನಂದನ್ ನನ್ನು ಚಾಕುವಿನಿಂದ ಮನಬಂದಂತೆ ಇರಿದು ಹತ್ಯೆಗೈದಿದ್ದಾನೆ. ಆರೋಪಿಗಳಾದ ದರ್ಶನ್ ಹಾಗೂ ಆಶ್ರಯ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...