alex Certify BIG NEWS: ಡ್ಯಾಂ ಗಳನ್ನು ಎತ್ತರಿಸಲು ಅವರ ತಾತನ ಮನೆಯದ್ದಲ್ಲ; ನೀರು ಬಂದ್ ಮಾಡುವ ಅಧಿಕಾರ ಯಾರಿಗೂ ಇಲ್ಲ; ಮಹಾ ಸರ್ಕಾರದ ವಿರುದ್ಧ ಸಚಿವ ಕಾರಜೋಳ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡ್ಯಾಂ ಗಳನ್ನು ಎತ್ತರಿಸಲು ಅವರ ತಾತನ ಮನೆಯದ್ದಲ್ಲ; ನೀರು ಬಂದ್ ಮಾಡುವ ಅಧಿಕಾರ ಯಾರಿಗೂ ಇಲ್ಲ; ಮಹಾ ಸರ್ಕಾರದ ವಿರುದ್ಧ ಸಚಿವ ಕಾರಜೋಳ ಆಕ್ರೋಶ

ಬೆಳಗಾವಿ: ಗಡಿ ವಿವಾದದ ಬೆನ್ನಲ್ಲೇ ಜಲ ವಿವಾದ ಸೃಷ್ಟಿಸಲು ಮುಂದಾಗಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ವಿಧಾನಸಭೆಯಲ್ಲಿ ಮಾತನಾಡಿದ ಸಚಿವರು, ಕರ್ನಾಟಕಕ್ಕೆ ಮಹಾರಾಷ್ಟ್ರ ಡ್ಯಾಂ ನಿಂದ ನೀರು ಬಿಡದಂತೆ ಎನ್ ಸಿಪಿ ಶಾಸಕ ಜಯಂತ್ ಪಾಟೀಲ್ ಹೇಳಿದ್ದಾರೆ. ಡ್ಯಾಂಗಳನ್ನು ಎತ್ತರಿಸುವ ಮೂಲಕ ನೀರು ತಡೆಹಿಡುವಂತೆ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಡ್ಯಾಂಗಳನ್ನು ಎತ್ತರ ಮಾಡಲು ಅವರ ತಾತನ ಮನೆಯದ್ದಲ್ಲ, ನ್ಯಾಯಯುತವಾಗಿ ನೀರು ಹಂಚಿಕೆ ಮಾಡಬೇಕು ಎಂದು ಗರಂ ಆದರು.

ನಮಗೆ ಸಿಗಬೇಕಾದ ನೀರು ನ್ಯಾಯಯುತವಾಗಿ ಸಿಕ್ಕಿದೆ. ನೀರು ಹಂಚಿಕೆ ಬಂದ್ ಮಾಡಲು ಯಾರಿಗೂ ಅಧಿಕಾರವಿಲ್ಲ. ಮಹಾರಾಷ್ಟ್ರ ಸರ್ಕಾರ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...