alex Certify BIG NEWS: ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಸಿಡಿದೆದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಸಿಡಿದೆದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್

ಬೆಂಗಳೂರು: 25 ಕೋಟಿ ವಂಚನೆಗೆ ಯತ್ನ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ನಿರ್ದೇಶಕ ಇಂದ್ರಜಿತ್ ಲಂಕೇಶ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಸ್ನೇಹಿತರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ನಟ ಹಾಗೂ ನಿರ್ಮಾಪಕರ ನಡುವೆ ಹಲವು ವ್ಯವಹಾರಗಳು ನಡೆದಿದ್ದು, ಮಹಿಳೆ ಅರುಣಾ ಕುಮಾರಿಯನ್ನು ಬಳಸಿಕೊಂಡು ವಂಚಿಸಿದ್ದಾರೆ. ಪ್ರಕರಣ ಹೊರ ಬರುತ್ತಿದ್ದಂತೆ 25 ಕೋಟಿ ವಂಚನೆ ಕೇಸ್ ನ್ನು ಮೈಸೂರು ಪೊಲೀಸ್ ಠಾಣೆಯಲ್ಲಿ ಸೆಟಲ್ ಮೆಂಟ್ ಮಾಡಿ ಮುಚ್ಚಿ ಹಾಕುವ ಯತ್ನ ನಡೆದಿದೆ. ಮಹಿಳೆ ಪ್ರಕರಣ ಬಹಿರಂಗ ಪಡಿಸುತ್ತಾಳೆ ಎಂದು ಗೊತ್ತಾಗುತ್ತಿದ್ದಂತೆ ಮಹಿಳೆಗೆ ಬೆದರಿಕೆಯೊಡ್ಡಲಾಗುತ್ತಿದೆ. ಆರೋಪಿ ಮಹಿಳೆ ಅರುಣಾ ಕುಮಾರಿಯನ್ನು ಆರ್.ಆರ್. ನಗರ ಮನೆ ಬಳಿ ಕಾರಿನಲ್ಲಿ ಕರೆಸಿಕೊಂಡು ಆಕೆಗೆ ದರ್ಶನ್ ಸ್ನೇಹಿತರು ಬೆದರಿಕೆ ಹಾಕಿದ್ದಾರೆ.

ಪಾಯಲ್ ರಜಪೂತ್ ಲೇಟೆಸ್ಟ್ ಫೋಟೋಶೂಟ್

ಅಂದು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆ ಸೀಳುತ್ತೇನೆ, ಹೊಡೆದು ಹಾಕುತ್ತೇನೆ ಎಂದೆಲ್ಲ ಮಾತನಾಡಿದ ದರ್ಶನ್ ಇಂದು ಉಲ್ಟಾ ಹೊಡೆಯಲು ಕಾರಣವೇನು? ಸಿನಿಮಾ ರೀತಿ ಕಥೆ ಕಟ್ಟಿ ಈಗ ಸುಮ್ಮನಾಗಿದ್ದೇಕೆ? ಓರ್ವ ಮಹಿಳೆಯನ್ನು ನಿಮ್ಮ ಮನೆಗೆ ಕರೆಸಿಕೊಂಡಿದ್ದಾದರೂ ಯಾಕೆ? ನಾಳೆ ಮಹಿಳೆಗೆ ತೊಂದರೆಯಾದರೆ ಯಾರು ಹೊಣೆ. ಒಳಗೊಳಗೆ ಏನೇನು ನಡೆದಿದೆ ಎಲ್ಲವೂ ನನಗೆ ಗೊತ್ತಿದೆ. ನನ್ನ ಬಳಿ ಸಾಕ್ಷಿಗಳಿವೆ. ಮೈಸೂರು ಪೊಲೀಸರು ಠಾಣೆಯಲ್ಲಿ ಸೆಟಲ್ ಮೆಂಟ್ ಮಾಡಿ ಕಳುಹಿಸಿದ್ರಾ? ಅವರೇನು ಕೈಗೆ ಬಳೆ ತೊಟ್ಟುಕೊಂಡಿದ್ದಾರೆಯೇ ಎಂದು ವಾಗ್ದಾಳಿ ನಡೆಸಿದ್ದಾರೆ. 25 ಕೋಟಿ ಸಾಲಕ್ಕಾಗಿ ವಂಚನೆ ಯತ್ನ ನಡೆದಿದೆ ಎಂದರೆ ಇದು ಸಾಮಾನ್ಯ ಪ್ರಕರಣವಲ್ಲ. ಇಡೀ ಪ್ರಕರಣ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...