alex Certify BIG NEWS: ಕೊಲ್ಲೂರು ಮೂಕಾಂಬಿಕೆಗೆ ʼಸಲಾಂ ಮಂಗಳಾರತಿʼ ನಿಲ್ಲಿಸಿ; RSS ಮುಖಂಡ ಪ್ರಭಾಕರ್ ಭಟ್ ಆಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊಲ್ಲೂರು ಮೂಕಾಂಬಿಕೆಗೆ ʼಸಲಾಂ ಮಂಗಳಾರತಿʼ ನಿಲ್ಲಿಸಿ; RSS ಮುಖಂಡ ಪ್ರಭಾಕರ್ ಭಟ್ ಆಗ್ರಹ

ಉಡುಪಿ: ಟಿಪ್ಪು ಸುಲ್ತಾನ್ ಹೆಸರಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ನಡೆಯುತ್ತಿರುವ ಸಲಾಂ ಮಂಗಳಾರತಿಯನ್ನು ತಕ್ಷಣ ನಿಲ್ಲಿಸುವಂತೆ ಆರ್.ಎಸ್.ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ನಮ್ಮ ದೇವರನ್ನು ಅವಮಾನ ಮಾಡಿದ ವ್ಯಕ್ತಿ, ಸಮಾಜ ನಾಶ ಮಾಡಲು ಹೊರಟ ದೇಶದ್ರೋಹಿಯಾದಂತಹ ಟಿಪ್ಪು ಹೆಸರಲ್ಲಿ ದೇವರಿಗೆ ಮಂಗಳಾರತಿ ಸರಿಯಲ್ಲ. ಇಂಥಾ ವ್ಯಕ್ತಿ ಹೆಸರಲ್ಲಿ ದೇವರಿಗೆ ಪೂಜಿಸುವುದೇ ಸೂಕ್ತವಲ್ಲ. ಇದರಿಂದ ದೇವರ ಶಕ್ತಿ ಕಡಿಮೆಯಾಗುತ್ತದೆ ಎನಿಸುತ್ತಿದೆ. ಹಾಗಾಗಿ ತಕ್ಷಣ ಸಲಾಂ ಮಂಗಳಾರತಿ ನಿಲ್ಲಿಸಿ, ಬೇರೆ ಹೆಸರಲ್ಲಿ ದೇವರಿಗೆ ಮಂಗಳಾರತಿ ನೆರವೇರಲಿ ಎಂದು ಹೇಳಿದರು.

ವೇಶ್ಯಾವಾಟಿಕೆಗೆ ತಳ್ಳಲು ಮುಂದಾಗಿದ್ದ ತಾಯಿಯನ್ನು ಸ್ನೇಹಿತರ ಜೊತೆ ಸೇರಿ ಹತ್ಯೆಗೈದ ಪುತ್ರಿ

ಗೊತ್ತಿಲ್ಲದೇ ಇಂತಹ ಪದ್ಧತಿ ನಡೆದಿದೆ. ಈಗ ವಿಷಯ ಗೊತ್ತಾಗಿರುವುದರಿಂದ ತಕ್ಷಣ ಹೆಸರು ಬದಲಿಸಿ ದೇವರ ಪೂಜೆ ನೆರವೇರಬೇಕು. ಇಲ್ಲವಾದಲ್ಲಿ ಸ್ವಲ್ಪ ವರ್ಷವಾದ್ರೆ ಅಲ್ಲಾಹು ಸಲಾಂ ಅಂತ ಪೂಜೆ ಶುರು ಮಾಡಲು ಹೇಳುತ್ತಾರೆ. ನಮ್ಮ ದೇವಸ್ಥಾನಗಳಲ್ಲಿ ಸಲಾಂ ಪೂಜೆ ನಡೆಯಬಾರದು. ಮುಸ್ಲಿಂರು ಅವರ ಸ್ಥಳಗಳಲ್ಲಿ ಮಾಡಿಕೊಳ್ಳಲಿ. ಆದರೆ ಹಿಂದೂ ದೇವಾಲಯಗಳಲ್ಲಿ ಬೇಡ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...