alex Certify BIG NEWS: ಕೂಗಾಡಿ, ಕಿರುಚಾಡಿ, ಗೂಂಡಾಗಿರಿ ಮಾಡಿ ಡ್ರಾಮಾ ಮಾಡೋದಷ್ಟೇ JDS ಶಾಸಕರಿಗೆ ಗೊತ್ತು; ಸಂಸದೆ ಸುಮಲತಾ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೂಗಾಡಿ, ಕಿರುಚಾಡಿ, ಗೂಂಡಾಗಿರಿ ಮಾಡಿ ಡ್ರಾಮಾ ಮಾಡೋದಷ್ಟೇ JDS ಶಾಸಕರಿಗೆ ಗೊತ್ತು; ಸಂಸದೆ ಸುಮಲತಾ ವಾಗ್ದಾಳಿ

ಮಂಡ್ಯ: ಜೆಡಿಎಸ್ ಶಾಸಕರಿಗೆ ಜನರ ಬಗ್ಗೆ ಕಾಳಜಿ ಇಲ್ಲ, ಜನಪರ ಸಮಸ್ಯೆಗಳಿಗೆ ಶಾಸಕರು ಸ್ಪಂದಿಸುತ್ತಲೂ ಇಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ಶಾಸಕರ ವಿರುದ್ಧ ಹರಿಹಾಯ್ದ ಸಂಸದೆ, 4 ವರ್ಷಗಳಿಂದ ಒಂದೇ ಒಂದು ಸಭೆಗೂ ಜೆಡಿಎಸ್ ಶಾಸಕರು ಬಂದಿಲ್ಲ. ಇಷ್ಟು ವರ್ಷ ಸಭೆಗೆ ಬರದ ಆಸಕ್ತಿ ಈಗ ಏಕೆ ಎಂದು ಪ್ರಶ್ನಿಸಿದ್ದಾರೆ.

ನಾನು ಅಕ್ರಮ ಗಣಿಗಾರಿಕೆ ವಿರುದ್ಧ ನಿಂತಾಗ ಸಭೆಗೆ ಬಂದಿದ್ದರು. ದಬ್ಬಾಳಿಕೆ, ಗೂಂಡಾಗಿರಿ ಬಿಟ್ಟರೆ ಜನರ ಪರ ಒಂದು ಮಾತನಾಡಿಲ್ಲ, ಜನಸಾಮಾನ್ಯರ ಸಮಸ್ಯೆ ಬಗ್ಗೆ ಎಂದೂ ವಿಚಾರಿಸಿಲ್ಲ. ಜನ ನಿಮ್ಮನ್ನು ಆಯ್ಕೆ ಮಾಡಿದ್ದು ಸುಮಲತಾ ಅವರನ್ನು ಟಾರ್ಗೆಟ್ ಮಾಡುವುದಕ್ಕಾ? ಕೂಗಾಡಿ, ಕಿರುಚಾಡಿ ಡ್ರಾಮಾ ಮಾಡೋದಷ್ಟೇ ಗೊತ್ತಿದೆ. ಜೆಡಿಎಸ್ ಶಾಸಕರಿಗೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಅವರದ್ದು ಬರಿ ರಾಜಕಾರಣವಷ್ಟೇ ಎಂದು ಕಿಡಿಕಾರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...