alex Certify BIG NEWS: ಕಾಂಗ್ರೆಸ್ ನಲ್ಲಿ ಮತ್ತೆ ಭುಗಿಲೆದ್ದ ಬಣ ರಾಜಕೀಯ; ವೇದಿಕೆ ಮೇಲೆಯೇ ಸಿಟ್ಟಾದ ಸಿದ್ದರಾಮಯ್ಯ; ಗರಂ ಆದ ಡಿ.ಕೆ.ಶಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾಂಗ್ರೆಸ್ ನಲ್ಲಿ ಮತ್ತೆ ಭುಗಿಲೆದ್ದ ಬಣ ರಾಜಕೀಯ; ವೇದಿಕೆ ಮೇಲೆಯೇ ಸಿಟ್ಟಾದ ಸಿದ್ದರಾಮಯ್ಯ; ಗರಂ ಆದ ಡಿ.ಕೆ.ಶಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣ ರಾಜಕೀಯ ಆರಂಭವಾದಂತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಷಣದ ವೇಳೆಯೇ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿ ಡಿಕೆ, ಡಿಕೆ ಎಂದು ಘೋಷಣೆ ಕೂಗಿದ ಘಟನೆ ನಡೆದಿದೆ.

ಅಲ್ಪಸಂಖ್ಯಾತ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವೇದಿಕೆ ಮೇಲೆ ಭಾಷಣ ಆರಂಭಿಸುತ್ತಿದ್ದಂತೆಯೇ ಕಾಂಗ್ರೆಸ್ ನ ಕೆಲ ಕಾರ್ಯಕರ್ತರು ಜಮೀರ್ ಅಹ್ಮದ್ ಫೋಟೋ ಹಿಡಿದು ಘೋಷಣೆ ಕೂಗಲಾರಂಭಿಸಿದರು. ಇದೇ ವೇಳೆ ಇನ್ನಷ್ಟು ಕಾರ್ಯಕರ್ತರು ಡಿಕೆ, ಡಿಕೆ ಎಂದು ಘೋಷಣೆ ಕೂಗಲಾರಂಭಿಸಿದರು.

ಲಕ್ಷಕ್ಕೂ ಆಧಿಕ ಲೈಕ್ಸ್‌ ಗಿಟ್ಟಿಸಿದೆ ಸ್ನೇಹಿತನಿಗೆ ಹೆದರಿಸಿದ ವ್ಯಕ್ತಿಯ ತಮಾಷೆ ವಿಡಿಯೋ

ಇದರಿಂದ ಸಿಟ್ಟಾದ ಸಿದ್ದರಾಮಯ್ಯ, ಯಾರೂ ಕೂಡ ಯಾವುದೇ ರೀತಿಯ ಘೋಷಣೆ ಕೂಗುವಂತಿಲ್ಲ, ಸುಮ್ಮನೆ ಕುಳಿತುಕೊಳ್ಳಿ ಎಂದು ಸೂಚಿಸಿದರು. ಆದಾಗ್ಯೂ ಸುಮ್ಮನಾಗದ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ವೇದಿಕೆಯತ್ತ ಧಾವಿಸಲಾರಂಭಿಸಿದರು. ತಕ್ಷಣ ವೇದಿಕೆ ಮೇಲೆ ಬಂದ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕನಿಗೆ ಭಾಷಣ ಮಾಡಲೂ ಬಿಡದೇ ಅಡ್ಡಿಪಡಿಸುತ್ತಿರುವ ನೀವೆಲ್ಲರೂ ಕಾಂಗ್ರೆಸ್ ದ್ರೋಹಿಗಳು, ಎಲ್ಲರನ್ನೂ ಪಕ್ಷದಿಂದ ಹೊರ ಹಾಕುತ್ತೇನೆ ಎಂದು ಗುಡುಗಿದರು. ಆದರೂ ಕಾರ್ಯಕರ್ತರಿಂದ ಡಿ.ಕೆ.ಶಿವಕುಮಾರ್ ಪರ ಘೋಷಣೆ ಮುಂದುವರೆಯುತ್ತಿದ್ದಂತೆ ಕೋಪಗೊಂಡ ಸಿದ್ದರಾಮಯ್ಯ ಅರ್ಧಕ್ಕೆ ಭಾಷಣ ನಿಲ್ಲಿಸಿ ವೇದಿಕೆಯಿಂದ ಕೆಳಗಿಳಿದ ಪ್ರಸಂಗ ನಡೆಯಿತು.

ಒಟ್ಟಾರೆ ಕಾಂಗ್ರೆಸ್ ಬಣ ರಾಜಕೀಯ ಮತ್ತೆ ಆರಂಭವಾಗಿದ್ದು, ವೇದಿಕೆ ಮೇಲೆಯೇ ಬಹಿರಂಗವಾದಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...