alex Certify BIG NEWS: ಓಮನ್‌ನಿಂದ ಝಾಕಿರ್‌ ನಾಯ್ಕ್‌ ಗಡಿಪಾರು ಸಾಧ್ಯತೆ; ಬಂಧಿಸಿ ಕರೆತರಲು ಸಜ್ಜಾದ ಭಾರತ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಓಮನ್‌ನಿಂದ ಝಾಕಿರ್‌ ನಾಯ್ಕ್‌ ಗಡಿಪಾರು ಸಾಧ್ಯತೆ; ಬಂಧಿಸಿ ಕರೆತರಲು ಸಜ್ಜಾದ ಭಾರತ….!

ತೀವ್ರಗಾಮಿ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ನನ್ನು ಓಮನ್‌ನಿಂದ ಗಡಿಪಾರು ಮಾಡುವ ಸಾಧ್ಯತೆ ಇದೆ. ಮಾರ್ಚ್ 23 ರಂದು ಒಮನ್‌ಗೆ ಭೇಟಿ ನೀಡಿ, ನಾಯಕ್‌ನನ್ನು ಬಂಧಿಸಲು ಭಾರತೀಯ ಗುಪ್ತಚರ ಸಂಸ್ಥೆಗಳು ಸಿದ್ಧತೆ ಮಾಡಿಕೊಂಡಿವೆ. ಈ ಸಂಬಂಧ ಅಲ್ಲಿನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿವೆ.

ಓಮನ್‌ನಲ್ಲಿ ಎರಡು ಉಪನ್ಯಾಸಗಳನ್ನು ನೀಡಲು ನಾಯಕ್ನನ್ನು ಆಹ್ವಾನಿಸಲಾಗಿದೆ. ಮೊದಲ ಉಪನ್ಯಾಸ “ದಿ ಖುರಾನ್ ಎ ಗ್ಲೋಬಲ್ ನೆಸೆಸಿಟಿ” ಅನ್ನೋ ವಿಷಯದ ಮೇಲಿದ್ದು, ಓಮನ್‌ನ ಅವ್ಕಾಫ್ ಮತ್ತು ಧಾರ್ಮಿಕ ವ್ಯವಹಾರಗಳ ಸಚಿವಾಲಯ ಇದನ್ನು ಆಯೋಜಿಸಿದೆ. ಮಾರ್ಚ್‌ 23ರಂದು ಝಾಕಿರ್‌ ನಾಯ್ಕ್‌ ಉಪನ್ಯಾಸ ನೀಡಲಿದ್ದಾನೆ.

ಎರಡನೇ ಉಪನ್ಯಾಸ “ಪ್ರವಾದಿ ಮುಹಮ್ಮದ್ ಎ ಮರ್ಸಿ ಟು ಹ್ಯೂಮನ್‌ ಕೈಂಡ್‌ ” ಎಂಬ ವಿಷಯದ ಮೇಲಿದ್ದು, ಮಾರ್ಚ್ 25 ರಂದು ಸಂಜೆ ಸುಲ್ತಾನ್ ಕಬೂಸ್ ವಿಶ್ವವಿದ್ಯಾಲಯದಲ್ಲಿ ನಿಗದಿಪಡಿಸಲಾಗಿದೆ.ಸ್ಥಳೀಯ ಕಾನೂನುಗಳ ಅಡಿಯಲ್ಲಿ ಆತನನ್ನು ಬಂಧಿಸಿ ಅಂತಿಮವಾಗಿ ಗಡಿಪಾರು ಮಾಡಲು ಸ್ಥಳೀಯ ಭಾರತೀಯ ರಾಯಭಾರ ಕಚೇರಿ, ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದೆ. ಭಾರತೀಯ ಗುಪ್ತಚರ ಸಂಸ್ಥೆಗಳ ಮೂಲಗಳು ಸ್ಥಳೀಯ ಅಧಿಕಾರಿಗಳು ತಮ್ಮ ಮನವಿಗೆ ಬದ್ಧರಾಗಿದ್ದು, ಝಾಕಿರ್‌ ನಾಯ್ಕ್‌ನನ್ನು ಬಂಧಿಸುವ ಬಲವಾದ ಸಾಧ್ಯತೆಗಳಿವೆ ಎಂದು ಹೇಳಿವೆ.

ಭಾರತೀಯ ಏಜೆನ್ಸಿಗಳು ಬಂಧನದ ನಂತರದ ಪ್ರಕ್ರಿಯೆಗಾಗಿ ತಂಡವನ್ನು ಸಹ ಓಮನ್‌ಗೆ ಕಳುಹಿಸಬಹುದು. ಓಮನ್‌ನಲ್ಲಿರುವ ಭಾರತೀಯ ರಾಯಭಾರಿಗಳು ಕೂಡ ಅಲ್ಲಿನ ಎಂಎಫ್‌ಎ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಈ ಹಿಂದೆ, FIFA ವಿಶ್ವಕಪ್ 2022 ನಲ್ಲಿ ಧಾರ್ಮಿಕ ಪ್ರವಚನ ನೀಡಲು ನಾಯಕ್ನನ್ನು ಕತಾರ್‌ಗೆ ಆಹ್ವಾನಿಸಲಾಗಿತ್ತು.  ಭಾರತದಲ್ಲಿ ಹಣ ವರ್ಗಾವಣೆ ಮತ್ತು ದ್ವೇಷದ ಭಾಷಣದ ಆರೋಪಗಳನ್ನು ಎದುರಿಸುತ್ತಿರುವ ನಾಯಕ್, 2017ರಲ್ಲಿ ಪರಾರಿಯಾಗಿದ್ದಾನೆ. ಮಲೇಷ್ಯಾದಲ್ಲಿ ಈತ ತಲೆಮರೆಸಿಕೊಂಡಿದ್ದ.

2016 ರ ಕೊನೆಯಲ್ಲಿ ಭಾರತವು ನಾಯಕ್‌ಗೆ ಸಂಬಂಧಪಟ್ಟ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (IRF) ಅನ್ನು ಕಾನೂನುಬಾಹಿರಗೊಳಿಸಿತು. ಈ ಗುಂಪಿನ ಅನುಯಾಯಿಗಳನ್ನು “ವಿವಿಧ ಧಾರ್ಮಿಕ ಸಮುದಾಯಗಳು ಮತ್ತು ಗುಂಪುಗಳ ನಡುವೆ ದ್ವೇಷ, ಕೆಟ್ಟ ಇಚ್ಛೆಯ ಭಾವನೆಗಳನ್ನು ಉತ್ತೇಜಿಸುವುದು,  ಉತ್ತೇಜಿಸಲು ಪ್ರಯತ್ನಿಸುತ್ತಿರುವʼʼ ಆರೋಪದ ಮೇಲೆ. ಮಾರ್ಚ್ 2022 ರಲ್ಲಿ, ಗೃಹ ವ್ಯವಹಾರಗಳ ಸಚಿವಾಲಯ (MHA) IRF ಅನ್ನು ಕಾನೂನುಬಾಹಿರ ಸಂಘವೆಂದು ಘೋಷಿಸಿತು ಮತ್ತು ಐದು ವರ್ಷಗಳ ಕಾಲ ಅದನ್ನು ಕಾನೂನು ಬಾಹಿರಗೊಳಿಸಿತು.

1990ರ ದಶಕದಲ್ಲಿ ಐಆರ್‌ಎಫ್ ಮೂಲಕ ದಾವಾ (ಜನರನ್ನು ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಆಹ್ವಾನಿಸುವ ಅಥವಾ ಕರೆಯುವ ಕ್ರಿಯೆ) ಚಟುವಟಿಕೆಗಳ ಮೂಲಕ ಖ್ಯಾತಿ ಗಳಿಸಿದ ನಾಯಕ್, ಪೀಸ್ ಟಿವಿಯ ಸ್ಥಾಪಕನೂ ಹೌದು. ಈ ವಾಹಿನಿ 100 ದಶಲಕ್ಷಕ್ಕೂ ಹೆಚ್ಚು ವೀಕ್ಷಕರ ವ್ಯಾಪ್ತಿಯನ್ನು ಹೊಂದಿದೆ. ಹಲವರು ಆತನನ್ನು ಸಲಫಿ ಸಿದ್ಧಾಂತದ ಪ್ರತಿಪಾದಕ ಎಂದು ಪರಿಗಣಿಸುತ್ತಾರೆ.ಕಾನೂನಿನಿಂದ ತಪ್ಪಿಸಿಕೊಳ್ಳಲು ನಾಯಕ್ ಮಲೇಷ್ಯಾಕ್ಕೆ ಸ್ಥಳಾಂತರಗೊಂಡಿದ್ದ. ಮಲೇಷ್ಯಾದಲ್ಲಿ ಶಾಶ್ವತ ನಿವಾಸವನ್ನು ಹೊಂದಿದ್ದರೂ ಸಹ, 2020 ರಲ್ಲಿ “ರಾಷ್ಟ್ರೀಯ ಭದ್ರತೆ”ಯ ಹಿತಾಸಕ್ತಿಗಳಲ್ಲಿ ಭಾಷಣಗಳನ್ನು ನೀಡದಂತೆ ದೇಶವು ನಾಯಕ್‌ಗೆ ನಿಷೇಧ ಹೇರಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...