alex Certify BIG NEWS: ಇದ್ದ ಒಬ್ಬ ಸಿಎಂನ್ನೂ ಕಾಂಗ್ರೆಸ್ ತೆಗೆದು ಹಾಕಿದೆ; ರಾಹುಲ್, ಸೋನಿಯಾಗಿಂತ ಜನಪ್ರಿಯರಾಗುತ್ತಾರೆ ಎಂದು ಹೀಗೆ ಮಾಡಿದೆ; ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇದ್ದ ಒಬ್ಬ ಸಿಎಂನ್ನೂ ಕಾಂಗ್ರೆಸ್ ತೆಗೆದು ಹಾಕಿದೆ; ರಾಹುಲ್, ಸೋನಿಯಾಗಿಂತ ಜನಪ್ರಿಯರಾಗುತ್ತಾರೆ ಎಂದು ಹೀಗೆ ಮಾಡಿದೆ; ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ

ದಾವಣಗೆರೆ: ಕ್ಯಾಪ್ಟನ್ ಅಮರಿಂದರ್ ಸಿಂಗ್ ಓರ್ವ ಸಮರ್ಥ ಮುಖ್ಯಮಂತ್ರಿಯಾಗಿದ್ದರು. ಇದ್ದ ಒಬ್ಬ ಸಿಎಂ ಅವರನ್ನೂ ಕಾಂಗ್ರೆಸ್ ತೆಗೆದು ಹಾಕಿ ಈಗ ಗೊಂದಲದಲ್ಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, ಅಮರಿಂದರ್ ಸಿಂಗ್ ಸಮರ್ಥ ನಾಯಕರಾಗಿದ್ದರು. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗಿಂತಲೂ ಪಾಪ್ಯುಲರ್ ಆಗುತ್ತಿದ್ದರು. ಇದೇ ದುರುದ್ದೇಶಕ್ಕೆ ಅವರನ್ನು ಸಿಎಂ ಸ್ಥಾನದಿಂದ ಕಾಂಗ್ರೆಸ್ ಕೆಳಗಿಳಿಸಿದೆ ಎಂದು ಗುಡುಗಿದರು.

ಅಪ್ರೆಂಟಿಶಿಪ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ಭಾರತ್ ಪೆಟ್ರೋಲಿಯಂ

ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸಿಎಂ ರೇಸ್ ಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಪೈಪೋಟಿ ಇದೆ. ಹೀಗಾಗಿ ಹೈಕಮಾಂಡ್ ಓಲೈಸಲು ಇಬ್ಬರೂ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಒಗ್ಗಟ್ಟು ಇಲ್ಲ ಎಂಬುದು ಬಯಲಾಗುತ್ತಿದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...