alex Certify BIG NEWS: ಇದು ಟಿಪ್ಪು ಸುಲ್ತಾನ್, ಒಡೆಯರ್ ನಡುವಿನ ಚುನಾವಣೆ ಎಂದ ಸಿ.ಟಿ. ರವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇದು ಟಿಪ್ಪು ಸುಲ್ತಾನ್, ಒಡೆಯರ್ ನಡುವಿನ ಚುನಾವಣೆ ಎಂದ ಸಿ.ಟಿ. ರವಿ

ಮಂಡ್ಯ: ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಮತಬೇಟೆಗೆ ಭರ್ಜರಿ ತಂತ್ರ ರೂಪುಸಿರುವ ರಾಜ್ಯ ಬಿಜೆಪಿ ಮಂಡ್ಯದಲ್ಲಿ ಬೃಹತ್ ಜನಸಂಕಲ್ಪ ಯಾತ್ರೆ ಸಮಾವೇಶ ನಡೆಸಿದೆ.

ಮಂಡ್ಯ ವಿವಿ ಆವರಣದಲ್ಲಿ ನಡೆದಿರುವ ಬಿಜೆಪಿ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗಿದ್ದಾರೆ. ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಎಲ್ಲರಿಗೂ ನ್ಯಾಯ ಕೊಡುವ ಕೆಲಸವನ್ನು ಮಾಡಿದ್ದು ನಮ್ಮ ಸರ್ಕಾರ. ಮಂಡ್ಯ ಯಾರ ಆಸ್ತಿಯಲ್ಲ ಅನ್ನೋ ಸಂದೇಶ ಜನರು ಕೊಡಬೇಕಾಗಿದೆ ಎಂದರು.

ಮುಂಬರುವ ವಿಧಾನಸಭಾ ಚುನಾವಣೆ ಟಿಪ್ಪು ಸುಲ್ತಾನ್, ಒಡೆಯರ್ ನಡುವಿನ ಚುನಾವಣೆ. ಮಂಡ್ಯ ಜಿಲ್ಲೆಯ ಜನ ಇತಿಹಾಸ ಸೃಷ್ಟಿ ಮಾಡಬೇಕು ಎಂದು ಕರೆ ನೀಡಿದರು. ಚುನಾವಣೆ ಸಂದರ್ಭದಲ್ಲಿ ಅಜ್ಜ ಮೊಮ್ಮಗನಿಗೆ ಸೀಟು ಬಿಟ್ಟುಕೊಡ್ತಾರೆ. ತಾಯಿ, ಮಗನಿಗೆ ಸೀಟು ಬಿಟ್ಟುಕೊಟ್ಟರೆ ತ್ಯಾಗ ಎಂದು ಹೇಳ್ತಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...