alex Certify BIG NEWS: ಅಂಬರೀಶ್ ಬಗ್ಗೆ ಮಾತಾಡುವಾಗ ಪ್ರಜ್ಞೆಯಿರಲಿ; ಮಾಜಿ ಸಿಎಂ ಹೆಚ್.ಡಿ.ಕೆ.‌ ಗೆ ರಾಕ್ ಲೈನ್ ವಾರ್ನಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಂಬರೀಶ್ ಬಗ್ಗೆ ಮಾತಾಡುವಾಗ ಪ್ರಜ್ಞೆಯಿರಲಿ; ಮಾಜಿ ಸಿಎಂ ಹೆಚ್.ಡಿ.ಕೆ.‌ ಗೆ ರಾಕ್ ಲೈನ್ ವಾರ್ನಿಂಗ್

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕಿಡಿಕಾರಿದ್ದು, ಒಂದೆಡೆ ಭ್ರಷ್ಟಾಚಾರ ಎಂದು ಆರೋಪ ಮಾಡುತ್ತೀರಿ, ಇನ್ನೊಂದೆಡೆ ಸ್ನೇಹಿತ ಎಂದು ಹೇಳುತ್ತೀರಿ. ಹಿರಿಯ ನಟ ದಿ. ಅಂಬರೀಶ್ ವಿಚಾರ ಮಾತನಾಡುವಾಗ ಪ್ರಜ್ಞೆಯಿರಲಿ ಎಂದು ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಕ್ ಲೈನ್, ಸಾವಿನ ರಾಜಕಾರಣ ಯಾಕೆ ಮಾಡುತ್ತೀರಿ ? ನೀವು ಮಾತನಾಡಿರುವ ರೀತಿ ನಮಗೆ ತುಂಬಾ ನೋವಾಗಿದೆ. ಅಂದು ಅಂಬರೀಶ್ ನಿಧನರಾದಾಗ ಮಂಡ್ಯಕ್ಕೆ ಕರೆದುಕೊಂಡು ಹೋಗಿದ್ದು ಅಭಿಷೇಕ್ ಒತ್ತಾಯದಿಂದ. ಅವತ್ತು ನೀವಲ್ಲ ಯಾರೇ ಸಿಎಂ ಆಗಿದ್ದರೂ ಹಾಗೇ ಮಾಡುತ್ತಿದ್ದರು. ಅಭಿ ಒತ್ತಾಯಿಸಿದ್ದಕ್ಕೆ ಮಂಡ್ಯಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ನೀವೂ ಕೂಡ ನನ್ನ ಬಳಿ ಹೇಳಿದ್ದೀರಿ. ಈಗ ಬೇರೆ ಮಾತನ್ನೇ ಆಡುತ್ತಿದ್ದೀರಿ. ಇರಲಿ ಒಂದುವೇಳೆ ನಿಮ್ಮಿಂದಲೇ ಆಯಿತು ಎಂದರೆ ನೀವು ಮಾಡಿದ ಕೆಲಸದಿಂದ ನಿಮಗೆ ಪುಣ್ಯ ಸಿಕ್ಕಿರುತ್ತೆ. ಸಿಕ್ಕಿರುವ ಪುಣ್ಯ ಹೇಳಿಕೆ ನೀಡಿ ಕಳೆದುಕೊಳ್ಳಬೇಡಿ ಎಂದಿದ್ದಾರೆ.

BIG NEWS: ಜೆಡಿಎಸ್ ನಾಯಕರಿಗೆ ದೇವೇಗೌಡರಿಂದ ಖಡಕ್ ವಾರ್ನಿಂಗ್

ಚಿತ್ರರಂಗದಿಂದ ಲಾಭಪಡೆದುಕೊಂಡು ಈಗ ಚಿತ್ರರಂಗದ ಬಗ್ಗೆ ಮಾತನಾಡುತ್ತಿದ್ದೀರಾ. ನೀವು ಸಿಎಂ ಆದಾಗ ಚಿತ್ರರಂಗಕ್ಕೆ ಏನು ಮಾಡಿದಿರಿ ? ಎದುರುಗಡೆ ಸ್ನೇಹಿತ ಅಂತೀರಾ? ನನ್ನ ಪ್ರಾಣ ಅಂತೀರಾ ಹಿಂದಿನಿಂದ ನಿಮ್ಮ ಕಡೆಯವರಿಂದ ಬೈಸುತ್ತೀರಾ ? ಗಣಿಗಾರಿಕೆ ಆರೋಪ ಮಾಡುತ್ತೀದ್ದೀರಾ ? ಸತ್ತಿರುವ ವ್ಯಕ್ತಿಯ ಹೆಸರನ್ನು ತಂದು ಇಂತಹ ರಾಜಕಾರಣ ಮಾಡಲು ನಾಚಿಕೆಯಾಗುವುದಿಲ್ಲವೇ ? ಇದೇ ರೀತಿ ಮುಂದುವರಿದರೆ ಸುಮ್ಮನಿರಲ್ಲ ಎಂದು ವಾರ್ನಿಂಗ್ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...