alex Certify BIG BREAKING: ಆಸ್ತಿಗಾಗಿ ಆರಂಭವಾದ ಜಗಳ; ತಮ್ಮನನ್ನೇ ಗುಂಡಿಟ್ಟು ಕೊಂದ ಅಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಆಸ್ತಿಗಾಗಿ ಆರಂಭವಾದ ಜಗಳ; ತಮ್ಮನನ್ನೇ ಗುಂಡಿಟ್ಟು ಕೊಂದ ಅಣ್ಣ

ಕೊಪ್ಪಳ: ಆಸ್ತಿ ವಿಚಾರವಾಗಿ ಆರಂಭವಾದ ಜಗಳ ಅಣ್ಣನೇ ತಮ್ಮನನ್ನು ಕೊಲೆಗೈಯ್ಯುವ ದುರಂತದಲ್ಲಿ ಅಂತ್ಯವಾದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಕವಲೂರಿನಲ್ಲಿ ಜಮೀನು ವಿಚಾರವಾಗಿ ಸಹೋದರರ ನಡುವೆ ಜಗಳ ಆರಂಭವಾಗಿದೆ. ರಾಘವೇಂದ್ರ ಎಂಬ ಸಹೋದರನ ಮೇಲೆ ತಮ್ಮಂದಿರಾದ ಯೋಗೇಶ್ ಹಾಗೂ ವಿನಾಯಕ ದಾಳಿ ನಡೆಸಿದ್ದಾರೆ. ಮೂವರ ನಡುವಿನ ವಾಗ್ವಾದ ಕಾದಾಟಕ್ಕೆ ತಿರುಗಿದ್ದು, ವಿಕೋಪಕ್ಕೆ ಹೋಗಿದೆ. ಈ ವೇಳೆ ಅಣ್ಣ ರಾಘವೇಂದ್ರ ತನ್ನ ಬಳಿಯಿದ್ದ ಬಂದೂಕಿನಿಂದ ಗುಂಡುಹಾರಿಸಿ, ತಮ್ಮ 35 ವರ್ಷದ ವಿನಾಯಕನನ್ನು ಹತ್ಯೆ ಮಾಡಿದ್ದಾನೆ.

ಘಟನೆಯಲ್ಲಿ ಮತ್ತೋರ್ವ ಸಹೋದರ ಯೋಗೇಶ್ ಗೂ ಗಾಯಗಳಾಗಿವೆ. ಸ್ಥಳಕ್ಕೆ ಕೊಪ್ಪಳ ಜಿಲ್ಲಾ ಎಸ್ ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...