alex Certify ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಉದ್ಯಮಿ ಅಡ್ಡಗಟ್ಟಿ ಹಲ್ಲೆ: 5 ಮಂದಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಉದ್ಯಮಿ ಅಡ್ಡಗಟ್ಟಿ ಹಲ್ಲೆ: 5 ಮಂದಿ ಅರೆಸ್ಟ್

ಬೆಂಗಳೂರು: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಉದ್ಯಮಿ ಮೇಲೆ ಹಲ್ಲೆ ನಡೆಸಲಾಗಿದೆ. ಬೆಂಗಳೂರಿನ ಬಾಗಲೂರು ಸಮೀಪ ಉದ್ಯಮಿ ರಾಮೇಶ್ವರ ಅವರ ಮೇಲೆ ಹಲ್ಲೆ ನಡೆಸಲಾಗಿದ್ದು, ಬಾಗಲೂರು ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕುಮಾರ್, ರಂಜಿತ್ ಅಲಿಯಾಸ್ ಸಂಜಯಕುಮಾರ್, ಆದಿತ್ಯ, ಶ್ರೀಕಾಂತ್ ರೆಡ್ಡಿ, ಮನೋಜ್ ಕುಮಾರ್ ಬಂಧಿತ ಆರೋಪಿಗಳು. ಲೋನ್ ಪಡೆಯಲು ಕುಮಾರ್ ಜೊತೆಗೆ ಉದ್ಯಮಿ ರಾಮೇಶ್ವರ ವ್ಯವಹಾರ ನಡೆಸಿದ್ದರು. ಲೋನ್ ಗೆ ಒಂದು ಪರ್ಸೆಂಟ್ ಹಣ ಕೊಡಬೇಕೆಂದು ಡೀಲ್ ಆಗಿತ್ತು. ಹಂತ ಹಂತವಾಗಿ ಕುಮಾರ್ ಒಂದು ಕೋಟಿ ರೂ. ಪಡೆದಿದ್ದ. ಆದರೆ, ಹಣ ಪಡೆದು ಲೋನ್ ಮಾಡಿಸಿಕೊಟ್ಟಿರಲಿಲ್ಲ. ಲೋನ್ ಮಾಡಿಸಿಕೊಡದ ಕಾರಣ ರಾಮೇಶ್ವರ ಹಣ ವಾಪಸ್ ಕೇಳಿದ್ದಾರೆ.

ಹೈದರಾಬಾದ್ ನಿಂದ ಬೆಂಗಳೂರಿಗೆ ಬಂದಿದ್ದ ಉದ್ಯಮಿ ರಾಮೇಶ್ವರ ಕ್ಯಾಬ್ ನಲ್ಲಿ ಬರುತ್ತಿದ್ದ ವೇಳೆ ಅಡ್ಡಗಟ್ಟಿ ಹಲ್ಲೆ ಮಾಡಲಾಗಿತ್ತು. ಈ ಕುರಿತು ರಾಮೇಶ್ವರ ಬಾಗಲೂರು ಠಾಣೆಗೆ ದೂರು ನೀಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...