ಚಿಕ್ಕಬಳ್ಳಾಪುರ : ನಾಟಿ ಔಷಧಿಗೆ 7 ವರ್ಷದ ಬಾಲಕ ಮೃತಪಟ್ಟ ಘೋರ ಘಟನೆ ಚಿಕ್ಕಬಳ್ಳಾಪುರದ ನಲ್ಲಗುಟ್ಟ ಪಾಳ್ಯದಲ್ಲಿ ನಡೆದಿದೆ. ಹಾಗೂ ಔಷಧ ಸೇವಿಸಿದ ಬಾಲಕನ ತಂದೆ ಹಾಗೂ ಸಹೋದರಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೃತ ಬಾಲಕನನ್ನುಶಶಿಕಲಾ ಹಾಗೂ ಶ್ರೀನಿವಾಸ್ ದಂಪತಿಯ ಪುತ್ರ ವೇದೇಶ್ (7) ಎಂದು ಗುರುತಿಸಲಾಗಿದೆ. ಮಗನಿಗೆ ನಾಟಿ ಔಷಧಿ ಕುಡಿಸಿದ ಶ್ರೀನಿವಾಸ್ ತಾನೂ ಕೂಡ ಕುಡಿದು ಮತ್ತೋರ್ವ ಪುತ್ರಿ ವೈಶಾಲಿಗೂ ನೀಡಿದ್ದಾನೆ. ಪರಿಣಾಮ ಕೂಡಲೇ ಎಲ್ಲರೂ ಅಸ್ವಸ್ಥಗೊಂಡಿದ್ದಾರೆ.
ಘಟನೆಯಲ್ಲಿ ತಂದೆ-ಮಗಳು ಆಸ್ಪತ್ರೆ ಸೇರಿದರೆ ಏನೂ ಅರಿಯದ 7 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಮೃತಪಟ್ಟ ಬಾಲಕ ವೇದೇಶ್ ದೇಹದ ಮೇಲೆ ಗುಳ್ಳೆಗಳಾಗಿದ್ದವು, ಇದಕ್ಕೆ ಗ್ರಾಮದ ಸತ್ಯನಾರಾಯಣ ಎಂಬಾತ ಔಷಧಿ ನೀಡಿದ್ದನು ಎಂದು ಹೇಳಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುವಾಗ ಬಾಲಕ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.