alex Certify SHOCKING: ಸಾಕಲು ಆಗ್ತಿಲ್ಲವೆಂದು ಒಂದೂವರೆ ವರ್ಷದ ಮಗು ಕೊಲೆಗೈದ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಸಾಕಲು ಆಗ್ತಿಲ್ಲವೆಂದು ಒಂದೂವರೆ ವರ್ಷದ ಮಗು ಕೊಲೆಗೈದ ತಂದೆ

ಮೈಸೂರು: ಸಾಕಲು ಆಗುತ್ತಿಲ್ಲವೆಂದು ಒಂದೂವರೆ ವರ್ಷದ ಮಗುವನ್ನು ತಂದೆ ಕೊಲೆ ಮಾಡಿದ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಎಂಬಲ್ಲಿ ನಡೆದಿದೆ.

ಕೆರೆಗೆ ಎಸೆದು ಒಂದೂವರೆ ವರ್ಷದ ಕುಮಾರ್ ಎಂಬ ಮಗುವನ್ನು ತಂದೆ ಗಣೇಶ ಕೊಲೆ ಮಾಡಿದ್ದಾನೆ. 2014ರಲ್ಲಿ ಲಕ್ಷ್ಮಿ ಅವರನ್ನು ಆರೋಪಿ ಗಣೇಶ ಮದುವೆಯಾಗಿದ್ದ. ಗಣೇಶ ಮತ್ತು ಲಕ್ಷ್ಮಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದರು. ಮತ್ತೊಂದು ಗಂಡು ಮಗುವಿನ ಹೆರಿಗೆಯಲ್ಲಿ ಲಕ್ಷ್ಮಿ ಮೃತಪಟ್ಟಿದ್ದರು. ಗಂಡು ಮಗುವಿನೊಂದಿಗೆ ಮಾಕೋಡು ಗ್ರಾಮದಲ್ಲಿ ವಾಸವಾಗಿದ್ದ ಗಣೇಶ ಸಾಕಲು ಆಗುತ್ತಿಲ್ಲ ಎಂದು ಮಗುವನ್ನು ಕೆರೆಗೆ ಎಸೆದಿದ್ದಾನೆ. ಆರೋಪಿ ಗಣೇಶನನ್ನು ಪಿರಿಯಾಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...