alex Certify ಅಯೋಧ್ಯೆಯಲ್ಲಿ ದಾಖಲೆಯ ಕಾಣಿಕೆ ಸಂಗ್ರಹ: 11 ದಿನದಲ್ಲಿ 25 ಲಕ್ಷ ಜನ ಭೇಟಿ: 11 ಕೋಟಿ ರೂ. ದೇಣಿಗೆ ಸಂಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಯೋಧ್ಯೆಯಲ್ಲಿ ದಾಖಲೆಯ ಕಾಣಿಕೆ ಸಂಗ್ರಹ: 11 ದಿನದಲ್ಲಿ 25 ಲಕ್ಷ ಜನ ಭೇಟಿ: 11 ಕೋಟಿ ರೂ. ದೇಣಿಗೆ ಸಂಗ್ರಹ

ಅಯೋಧ್ಯೆ: ಜನವರಿ 22ರಂದು ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರಿದ ನಂತರ 11 ದಿನದ ಅವಧಿಯಲ್ಲಿ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ 25 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ.

ಈ ಅವಧಿಯಲ್ಲಿ ದೇಗುಲದ ಹುಂಡಿಗೆ 11 ಕೋಟಿ ರೂ. ಕಾಣಿಕೆ ಬಂದಿದೆ. ಹುಂಡಿಗೆ ನೇರವಾಗಿ 8 ಕೋಟಿ ರೂ., ಆನ್ಲೈನ್ ಮೂಲಕ 3.5 ಕೋಟಿ ರೂಪಾಯಿ ಸಂಗ್ರಹವಾಗಿದೆ. ದೇವಾಲಯದ ಗರ್ಭಗುಡಿ ಪ್ರದೇಶದಲ್ಲಿ ನಾಲ್ಕು ದೊಡ್ಡ ಹುಂಡಿಗಳನ್ನು ಇಡಲಾಗಿದ್ದು, ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ. 11 ಬ್ಯಾಂಕ್ ಉದ್ಯೋಗಿಗಳು ಸೇರಿದಂತೆ 14 ಮಂದಿ ಹುಂಡಿಯ ಹಣ ಎಣಿಕೆ ಮಾಡುತ್ತಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...