alex Certify ಶಾಸಕ ಯತ್ನಾಳ್ ಹುಚ್ಚ ವೆಂಕಟ್ ಇದ್ದಂತೆ: ಆಯನೂರು ಮಂಜುನಾಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಸಕ ಯತ್ನಾಳ್ ಹುಚ್ಚ ವೆಂಕಟ್ ಇದ್ದಂತೆ: ಆಯನೂರು ಮಂಜುನಾಥ

ಬೆಂಗಳೂರು: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಹುಚ್ಚ ವೆಂಕಟ್ ಇದ್ದಂತೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.

ಆತ್ಮರತಿಯ ವ್ಯಕ್ತಿಯಾಗಿರುವ ಬಸವನಗೌಡ ಪಾಟೀಲ್ ಪ್ರಚಾರಪ್ರಿಯರು. ತಮ್ಮನ್ನು ತಾವು ನಾಯಕ ಎಂದು ಕೊಂಡಿದ್ದಾರೆ. ಒಂದು ಕಾಲದಲ್ಲಿ ಹುಚ್ಚ ವೆಂಕಟ್ ಗೆ ಪ್ರಚಾರ ಸಿಕ್ಕಿತ್ತು. ಯತ್ನಾಳ್ ಅವರಿಗೂ ಪ್ರಚಾರ ಸಿಗುತ್ತಿದೆ. ಪ್ರಚಾರದಿಂದ ಯಾರೂ ನಾಯಕರಾಗುವುದಿಲ್ಲ. ಹುಚ್ಚ ವೆಂಕಟ್ ಕಾರಿಗೆ ಕಲ್ಲು ಹೊಡೆದಿದ್ದರು. ಯತ್ನಾಳ್ ಪಕ್ಷಕ್ಕೆ ಕಲ್ಲು ಹೊಡೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಗಾಳಿಪಟ ಎಷ್ಟು ಎತ್ತರಕ್ಕೆ ಹಾರಾಡಿದರೂ ಕೈಯಲ್ಲೇ ಸೂತ್ರ ಇರುತ್ತದೆ. ದಾರವನ್ನು ಸುತ್ತಿ ಕೆಳಗಿಳಿಸುವುದು ಪಕ್ಷಕ್ಕೆ ಗೊತ್ತಿದೆ. ಗೂಳಿ ಮಿತಿಮೀರಿ ಸುತ್ತಾಡಿದಾಗ ಹಗ್ಗದಿಂದ ಗೂಟಕ್ಕೆ ಕಟ್ಟಿ ಹಾಕುವುದು ಪಕ್ಷಕ್ಕೆ ಗೊತ್ತಿದೆ ಎಂದು ಶಿಸ್ತು ಕ್ರಮದ ಬಗ್ಗೆ ಹೇಳಿದ್ದಾರೆ. ಹೇಳಿಕೆ ಕೊಡುವುದರಿಂದ, ಪ್ರಚಾರದಿಂದ ಯಾರೂ ನಾಯಕರಾಗುವುದಿಲ್ಲ. ನಾಯಕರು ಪ್ರಚಾರವನ್ನೇ ಬಯಸುವುದಿಲ್ಲ ಎನ್ನುವುದನ್ನು ಯತ್ನಾಳ್ ಅರ್ಥಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...