alex Certify ಈ ರಾಶಿಯವರಿಗಿದೆ ಇಂದು ವ್ಯಾಪಾರದಲ್ಲಿ ಹೆಚ್ಚಿನ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ವ್ಯಾಪಾರದಲ್ಲಿ ಹೆಚ್ಚಿನ ಲಾಭ

ಮೇಷ : ಉದ್ಯಮದಲ್ಲಿ ಇಂದು ಮಿಶ್ರ ಲಾಭವನ್ನು ಪಡೆಯಲಿದ್ದೀರಿ. ಕಚೇರಿ ಕೆಲಸದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ.

ವೃಷಭ : ಅನವಶ್ಯಕ ಖರ್ಚುಗಳಿಗೆ ಆದಷ್ಟು ಬೇಗ ಕಡಿವಾಣ ಹಾಕಿದಷ್ಟೂ ನಿಮಗೇ ಒಳ್ಳೆಯದು. ಇಲ್ಲವಾದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಇನ್ನಷ್ಟು ಸಂಕಷ್ಟಕ್ಕೆ ಈಡಾಗಲಿದೆ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇದೆ. ನಿಮ್ಮೆಲ್ಲ ಕಷ್ಟಗಳಿಗೆ ಸಂಗಾತಿ ಹೆಗಲಾಗಲಿದ್ದಾರೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಿದೆ.

ಮಿಥುನ : ಸಂಗಾತಿಯೊಂದಿಗೆ ಪಾರದರ್ಶಕವಾಗಿ ವರ್ತಿಸಿ. ಚಿಕ್ಕ ಅನುಮಾನವೂ ಸಂಸಾರದ ನೊಗವನ್ನೇ ಕತ್ತರಿಸಿಬಿಡಬಹುದು. ಕಚೇರಿ ಕೆಲಸದಲ್ಲಿ ನಿಮಗೆ ಒತ್ತಡ ಹೆಚ್ಚಾಗಲಿದೆ. ಆದರೆ ಸಂಗಾತಿ ಕುಟುಂಬ ನಿರ್ವಹಣೆ ಚೆನ್ನಾಗಿ ಮಾಡೋದ್ರಿಂದ ಕೆಲಸದ ಮೇಲೆ ಗಮನ ನೀಡೋದು ಸುಲಭ ಎನಿಸಲಿದೆ.

ಕಟಕ : ವ್ಯಾಪಾರ – ವ್ಯವಹಾರದಲ್ಲಿ ಪ್ರಗತಿ ಕಾಣಲಿದ್ದೀರಿ. ಆರ್ಥಿಕ ಪರಿಸ್ಥಿತಿ ಸುಧಾರಿಸಿದರೂ ಸಹ ಖರ್ಚು ವೆಚ್ಚದಲ್ಲಿ ಯಾವುದೇ ರೀತಿಯ ಹಿಡಿತ ಕಂಡುಬರೋದಿಲ್ಲ.  ಆಹಾರ ಪದ್ಧತಿಯ ಕಡೆಗೆ ಗಮನವಿರಲಿ. ಮಾತು ಹಿಡಿತದಲ್ಲಿರಲಿ.

ಸಿಂಹ ರಾಶಿ

ಆರೋಗ್ಯ ಮತ್ತು ವಿವಾದ ನಿಮ್ಮ ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರಲಿದೆ. ಸಾರ್ವಜನಿಕ ಜೀವನದಲ್ಲಿ ಅಪಯಶಸ್ಸಾಗದಂತೆ ಎಚ್ಚರ ವಹಿಸಿ. ವಿರುದ್ಧ ಲಿಂಗಿಗಳ ಬಗ್ಗೆ ಆಕರ್ಷಣೆ ಹೆಚ್ಚಲಿದೆ.

ಕನ್ಯಾ : ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಿರಿಕಿರಿ ಉಂಟುಮಾಡಬಹುದು. ಆದರೂ ಎಚ್ಚರಿಕೆಯಿಂದಿರಿ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಯು ನಿಮ್ಮನ್ನು ಹೆಚ್ಚು ಕಾಡಲಿದೆ. ಕಚೇರಿ ಕೆಲಸದಲ್ಲಿ ನೀವು ತೋರುವ ಶ್ರದ್ಧೆ ನಿಮಗೆ ಭವಿಷ್ಯದಲ್ಲಿ ಲಾಭ ತರಲಿದೆ.

ತುಲಾ : ಪೋಷಕರ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬರಲಿದೆ. ಸೋಮಾರಿತನದಿಂದ ಸೂಕ್ತ ಅವಕಾಶಗಳನ್ನು ಕಳೆದುಕೊಳ್ಳಲಿದ್ದೀರಿ. ಹಿರಿಯರ ಮಾರ್ಗದರ್ಶನ ದಾರಿದೀಪವಾಗಲಿದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭ ಗಳಿಸುವತ್ತ ವಿವಿಧ ಯೋಜನೆಗಳನ್ನು ರೂಪಿಸಲಿದ್ದೀರಿ.

ವೃಶ್ಚಿಕ : ಕಲಾವಿದರಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ಜವಳಿ ಉದ್ಯಮಿಗಳಿಗೆ ಇದು ಲಾಭದ ದಿನ. ಪುಟ್ಟ ಮಕ್ಕಳು ಅಗ್ನಿಯಿಂದ ದೂರ ಇರೋದು ಒಳ್ಳೆಯದು. ಗೊತ್ತಿಲ್ಲದೇ ಮಾಡೋ ನೋವು ಮಾಗುತ್ತದೆ. ಆದರೆ ಗೊತ್ತಿದ್ದೂ ಮಾಡುವ ನೋವು ಶಾಶ್ವತವಾಗಿ ಮನಸ್ಸಿನಲ್ಲಿ ತಳವೂರುತ್ತದೆ ಅನ್ನೋದು ತಲೆಯಲ್ಲಿ ಇರಲಿ.

ಧನು : ಸಂಗಾತಿ ಅನುಭವಿಸುವ ಮಾನಸಿಕ ಒತ್ತಡ ನಿಮ್ಮ ನೆಮ್ಮದಿಯನ್ನೂ ಹಾಳು ಮಾಡಿಬಿಡಲಿದೆ. ಆದರೆ ದೃತಿಗೆಡದೇ ಸಂಗಾತಿ ನೋವಿಗೆ ಹೆಗಲು ನೀಡಿ. ಆರೋಗ್ಯದ ಸಮಸ್ಯೆ ನಿಮ್ಮನ್ನು ಕಾಡಬಹುದು. ಸರಿಯಾದ ಸಮಯಕ್ಕೆ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಿ.

ಮಕರ : ವ್ಯಾಪಾರ ಹಾಗೂ ಉದ್ಯೋಗದಲ್ಲಿ ಪ್ರಗತಿ ಕಾಣಲಿದೆ. ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಭಾಗ್ಯವಿದೆ. ನಿಮ್ಮಿಂದ ಸಾಲ ಪಡೆದವರು ನಿಮ್ಮ ಕಣ್ತಪ್ಪಿಸಿ ತಿರುಗಾಡುತ್ತಿದ್ದಾರೆ. ಇದರಿಂದ ನೀವು ಕಿರಿಕಿರಿ ಅನುಭವಿಸಲಿದ್ದೀರಿ. ರಾಜಕೀಯ ರಂಗದವರಿಗೆ ಸಾರ್ವಜನಿಕ ಜೀವನದಲ್ಲಿ ಮನ್ನಣೆ ಸಿಗಲಿದೆ.

ಕುಂಭ : ಹಣಕಾಸಿನ ವಿಚಾರದಲ್ಲಿ ಪ್ರಗತಿ ಇದೆ . ಮಕ್ಕಳು ವಿದ್ಯಾಭ್ಯಾಸ ಮಾಡಲು ಹಿಂದೇಟು ಹಾಕುತ್ತಿರೋದು ನಿಮ್ಮ ಆತಂಕಕ್ಕೆ ಕಾರಣವಾಗಿದೆ. ಆದಷ್ಟು ಮಕ್ಕಳಿಗೆ ವ್ಯಾಸಂಗದ ಕಡೆ ಗಮನ ನೀಡುವಂತೆ ಪ್ರೋತ್ಸಾಹಿಸಿ. ಉದ್ಯೋಗಕ್ಕಾಗಿ ಅರಸುತ್ತಿರುವವರಿಗೆ ಉತ್ತಮ ಅವಕಾಶ ಹುಡುಕಿಕೊಂಡು ಬರಲಿದೆ.

ಮೀನ : ನೀವು ಕಳೆದುಕೊಂಡಿದ್ದ ಅಮೂಲ್ಯ ವಸ್ತುವೊಂದು ಅನಿರೀಕ್ಷಿತವಾಗಿ ಮತ್ತೆ ನಿಮ್ಮ ಕೈಸೇರಲಿದೆ.ಸಾರ್ವಜನಿಕ ಜೀವನದಲ್ಲಿ ಉತ್ತಮ ಸ್ಥಾನಮಾನ ಸಿಗಲಿದೆ. ಮಿತಭಾಷಿ ಆಗಿರುವ ನೀವು ಅನವಶ್ಯಕ ಕಲಹಗಳಲ್ಲಿ ಮೂಗು ತೋರಿಸೋದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...