alex Certify ಆರ್ಯನ್​ ಬಂಧಮುಕ್ತವಾಗುವವರೆಗೂ ಸಿಹಿ ತಿನ್ನದಿರಲು ಗೌರಿ ಖಾನ್​ ಶಪಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಯನ್​ ಬಂಧಮುಕ್ತವಾಗುವವರೆಗೂ ಸಿಹಿ ತಿನ್ನದಿರಲು ಗೌರಿ ಖಾನ್​ ಶಪಥ

ಡ್ರಗ್​ ಸೇವನೆ ಪ್ರಕರಣದಲ್ಲಿ ಎನ್​ಸಿಬಿ ಪೊಲೀಸರ ಬಲೆಗೆ ಸಿಲುಕಿರುವ ಆರ್ಯನ್​ ಖಾನ್​​​ ದಿನಕ್ಕೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದ್ದಾನೆ. ಆರ್ಯನ್​​ಗೆ ಜಾಮೀನು ದೊರಕಿಸಲು ವಕೀಲರು ಸತತ ಪ್ರಯತ್ನ ಮುಂದುವರಿಸಿದ್ದಾರೆ. ಪುತ್ರನಿಗೆ ಜಾಮೀನು ಸಿಗದೇ ಇರೋದು ಪೋಷಕರಾದ ಶಾರೂಕ್​ ಖಾನ್​ ಹಾಗೂ ಗೌರಿ ಖಾನ್​​ ಆತಂಕಕ್ಕೆ ಕಾರಣವಾಗಿದೆ.

ಗಳಿಕೆಯಲ್ಲಿ ದಾಖಲೆ: ಗಲ್ಲಾಪೆಟ್ಟಿಗೆ ಲೂಟಿ ಮಾಡಿದ ‘ಕೋಟಿಗೊಬ್ಬ’, ನಾಲ್ಕೇ ದಿನದಲ್ಲಿ 40 ಕೋಟಿ ಕಲೆಕ್ಷನ್

ಉನ್ನತ ಮೂಲಗಳಿಂದ ದೊರಕಿರುವ ಮಾಹಿತಿಯ ಪ್ರಕಾರ, ಮನೆಯಲ್ಲಿ ಮಧ್ಯಾಹ್ನದ ಊಟದ ಜೊತೆಯಲ್ಲಿ ಅಡುಗೆ ಸಿಬ್ಬಂದಿ ಖೀರನ್ನು ತಯಾರಿಸುತ್ತಿರುವುದನ್ನು ಗಮನಿಸಿದ ಗೌರಿ ಖಾನ್​ ಕೂಡಲೇ ಖೀರನ್ನು ತಯಾರಿಸದಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಆರ್ಯನ್​ ಮನೆಗೆ ವಾಪಸ್ಸಾಗುವವರೆಗೂ ಯಾವುದೇ ರೀತಿಯ ಸಿಹಿ ಪದಾರ್ಥ ಮನೆಯಲ್ಲಿ ತಯಾರಿಸುವಂತಿಲ್ಲ ಎಂದು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮಗನ ಬಂಧನದಿಂದ ಗೌರಿ ಖಾನ್​ ಆತಂಕಕ್ಕೆ ಸಿಲುಕಿದ್ದು ಮಗನಿಗೆ ಜಾಮೀನು ಸಿಗಲಿ ಎಂದು ಪ್ರತಿನಿತ್ಯ ಪ್ರಾರ್ಥನೆ ಸಲ್ಲಿಸುತ್ತಿದ್ದಾರಂತೆ.

10 ತಿಂಗಳಲ್ಲಿ 20 ಲಕ್ಷ ರೂ. ಉಳಿಸಿದ ಜೋಡಿ….!

ಇತ್ತ ಬಾಲಿವುಡ್ ನಟ ಶಾರೂಕ್ ಖಾನ್​ ತಾವು ಈಗ ಜೀವನದ ಕಷ್ಟದ ಘಳಿಗೆಯಲ್ಲಿದ್ದು ಯಾರಿಗೂ ಮನೆಗೆ ಆಗಮಿಸದಂತೆ ಸ್ನೇಹಿತರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಫೋನ್​ ಕಾಲ್​ ಮೂಲಕವೇ ತಮ್ಮ ಸ್ನೇಹಿತರ ಜೊತೆ ಶಾರೂಕ್​ ಸಂಪರ್ಕದಲ್ಲಿದ್ದಾರೆ. ಆರ್ಯನ್​ ಖಾನ್​ ಬಂಧನದ ಬಳಿಕ ಪ್ರೀತಿ ಜಿಂಟಾ ಹಾಗೂ ಸಲ್ಮಾನ್​ ಖಾನ್​ ಶಾರೂಕ್​ ನಿವಾಸದ ಬಳಿ ಕಾಣಿಸಿಕೊಂಡಿದ್ದರು.

ಆರ್ಯನ್​ ಖಾನ್​ ಕ್ಯಾಂಟೀನ್​ ಖರ್ಚಿಗೆಂದು ಅರ್ತೂರ್​ ಜೈಲು ಆಡಳಿತ ಮಂಡಳಿಗೆ ಶಾರೂಕ್​​ 4500 ರೂಪಾಯಿ ಮನಿ ಆರ್ಡರ್​ ಮಾಡಿದ್ದಾರೆ. ಕೋವಿಡ್​ 19 ಹಿನ್ನೆಲೆಯಲ್ಲಿ ಜೈಲಿಗೆ ಪ್ರವೇಶಿಸಲು ಗೌರಿ ಹಾಗೂ ಶಾರೂಕ್​ ಖಾನ್​ಗೆ ಅನುಮತಿ ಇಲ್ಲದ ಹಿನ್ನೆಲೆಯಲ್ಲಿ ಆರ್ಯನ್​ ಜೊತೆ ವಿಡಿಯೋ ಕಾಲ್​​ ಮೂಲಕ 10 ನಿಮಿಷಗಳ ಕಾಲ ಮಾತನಾಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...