alex Certify ಭ್ರಷ್ಟರ ವಿರುದ್ಧ ಹೋರಾಟ ನಿರಂತರ, ಉನ್ನತ ಹುದ್ದೆಗೆ ನನ್ನ ಹೆಸರು ಪರಿಗಣಿಸಿ ಮೋದಿ ಗಮನಕ್ಕೆ ಬಂದಿತ್ತು: ಅರವಿಂದ ಬೆಲ್ಲದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭ್ರಷ್ಟರ ವಿರುದ್ಧ ಹೋರಾಟ ನಿರಂತರ, ಉನ್ನತ ಹುದ್ದೆಗೆ ನನ್ನ ಹೆಸರು ಪರಿಗಣಿಸಿ ಮೋದಿ ಗಮನಕ್ಕೆ ಬಂದಿತ್ತು: ಅರವಿಂದ ಬೆಲ್ಲದ

ತಮಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಪ್ರತಿಭಟನೆ ಮಾಡಬೇಡಿ ಎಂದು ಫೇಸ್ಬುಕ್ ನಲ್ಲಿ ಶಾಸಕ ಅರವಿಂದ ಬೆಲ್ಲದ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.

ಹುಬ್ಬಳ್ಳಿ-ಧಾರವಾಡ-ಪಶ್ಚಿಮ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ನನ್ನ ಹೆಸರು ರಾಜ್ಯದ ಉನ್ನತ ಹುದ್ದೆಗೆ ಪರಿಗಣಿಸಿ ಪ್ರಧಾನಿಯವರ ಗಮನಕ್ಕೂ ಬಂದಿತ್ತು. ಇದು ಜನರ ಕ್ಷೇತ್ರದ ಜನರ ಆಶೀರ್ವಾದಿಂದ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ತಿಳಿಸಿದ್ದು, ಸಚಿವ ಸ್ಥಾನ ಸಿಗದಿರುವುದಕ್ಕೆ ನಿಮ್ಮೆಲ್ಲರ ರೀತಿ ನನಗೂ ಬೇಸರವಿದೆ. ಪಕ್ಷದ ಚೌಕಟ್ಟಿನಲ್ಲಿ ಎಲ್ಲವನ್ನು ಸಹಿಸಿಕೊಳ್ಳುತ್ತೇನೆ. ಕ್ಷೇತ್ರದ ಜನರ ಸೇವೆ ಮಾಡಲು ಯಾವುದೇ ಅಡೆತಡೆ ಇರುವುದಿಲ್ಲ. ಕೊರೋನಾ ಕಾಲದಲ್ಲಿ ಬೀದಿಗಿಳಿದು ಪ್ರತಿಭಟನೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ನನ್ನ ಹಾಗೂ ಕುಟುಂಬದ ಮೇಲೆ ಭ್ರಷ್ಟಾಚಾರದ ಕಪ್ಪುಚುಕ್ಕೆ ಇಲ್ಲ. ಮುಂದೆಯೂ ನಾನು ಭ್ರಷ್ಟರ ವಿರುದ್ಧ ಹೋರಾಟ ಮಾಡುತ್ತೇನೆ. ಇದಕ್ಕೆ ನಿಮ್ಮ ಸಹಕಾರ ಇರುತ್ತದೆ ಎಂದು ನಂಬಿದ್ದೇನೆ ಎಂದು ಫೇಸ್ಬುಕ್ ನಲ್ಲಿ ಅರವಿಂದ ಬೆಲ್ಲದ ಪೋಸ್ಟ್ ಹಾಕಿದ್ದಾರೆ.

ಆತ್ಮೀಯರೇ.,ಧಾರವಾಡ-74 ಮತಕ್ಷೇತ್ರವನ್ನು ಕಳೆದ 2 ಅವಧಿಯಿಂದ ಪ್ರತಿನಿಧಿಸುತ್ತಿದ್ದೇನೆ. ಕ್ಷೇತ್ರದ ಮತದಾರರ ಪ್ರೀತಿ-ವಿಶ್ವಾಸ, ಬೆಂಬಲದಿಂದ…

Posted by Arvind Bellad on Thursday, August 5, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...