alex Certify ಪಾಪಿ ಪತಿಯ ಘೋರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಪಿ ಪತಿಯ ಘೋರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ

ಪತ್ನಿ ಹಣ ಕೊಡಲು ನಿರಾಕರಿಸಿದಳು ಎಂಬ ಒಂದೇ ಕಾರಣಕ್ಕೆ ಆಕೆಯನ್ನ ಪತಿ ಬರ್ಬರವಾಗಿ ಕೊಲೆಗೈದ ದಾರುಣ ಘಟನೆ ಚಿತ್ತೂರ್​ ಜಿಲ್ಲೆಯ ರಾಮಸಮುದ್ರಂ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯರನ್ನ ಭುವನೇಶ್ವರಿ ಎಂದು ಗುರುತಿಸಲಾಗಿದ್ದು ಈಕೆ ವೃತ್ತಿಯಲ್ಲಿ ಟೆಕ್ಕಿ ಆಗಿದ್ದರು ಎನ್ನಲಾಗಿದೆ.

ಈ ಭಯಾನಕ ಘಟನೆಯ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿ ಕೊಲೆಗಾರ ಪತಿ ಸೂಟ್​ಕೇಸ್​ ತೆಗೆದುಕೊಂಡು ಅಪಾರ್ಟ್​ಮೆಂಟ್​ ಒಳಗೆ ಬರ್ತಿರೋದನ್ನ ಕಾಣಬಹುದಾಗಿದೆ. ಕೆಲ ಸಮಯದ ಬಳಿಕ ಈತ ಪತ್ನಿ ಹೆಣವನ್ನು ಇದರಲ್ಲಿ ತುಂಬಿಕೊಂಡು ಸೂಟ್​ಕೇಸ್​ ಸಮೇತ ಅಪಾರ್ಟ್​ಮೆಂಟ್​ನಿಂದ ಹೊರನಡೆದಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಹೈದರಾಬಾದ್​ನ ಎಂಎನ್​ಸಿ ಕಂಪನಿಯಲ್ಲಿ ಟೆಕ್ಕಿ ಆಗಿದ್ದ ಭುವನೇಶ್ವರಿ ಕಾಣೆಯಾಗಿದ್ದಾರೆ ಎಂಬ ದೂರು ದಾಖಲಾಗಿತ್ತು. ಜೂನ್​ 23ರಂದು ಸೂಟ್​ಕೇಸ್​ನಲ್ಲಿ ಸುಟ್ಟು ಹೋಗಿದ್ದ ಶವ ಪತ್ತೆಯಾಗಿತ್ತು.

ಮಂಗಳವಾರ ಮಧ್ಯಾಹ್ನ ನಮಗೆ ಸುಟ್ಟು ಹೋದ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ನಾವು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆವು. ಶವವು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಆದರೆ ಮೂಳೆಗಳು ಮಾತ್ರ ಸಿಕ್ಕಿದ್ದವು. ಈ ಸುಟ್ಟ ದೇಹವನ್ನೇ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಯ್ತು ಎಂದು ತಿರುಪತಿಯ ಅಲಿಪಿರಿ ಠಾಣೆಯ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ರು.

ತನಿಖೆ ವೇಳೆ ಭುವನೇಶ್ವರಿ ಪತಿ ಮರಮ್​ರೆಡ್ಡಿ ಶ್ರೀಕಾಂತ್​ ರೆಡ್ಡಿಯೇ ಈ ಕೊಲೆಯ ಆರೋಪಿ ಎಂದು ತಿಳಿದು ಬಂದಿದೆ. ಚಾಕುವಿನಿಂದ ಇರಿದು ಹೆಂಡತಿಯನ್ನ ಕೊಲೆ ಮಾಡಿದ್ದ ಮರಮ್​ ಬಳಿಕ ಆಕೆಯ ಶವವನ್ನ ಸೂಟ್​ಕೇಸ್​ನಲ್ಲಿ ಇರಿಸಿ ಸುಟ್ಟುಹಾಕಿದ್ದ ಎನ್ನಲಾಗಿದೆ.

ಆರೋಪಿ ಮರಮ್ ಕೂಡ ವೃತ್ತಿಯಲ್ಲಿ ಟೆಕ್ಕಿ ಆಗಿದ್ದು ಕೊರೊನಾ ಕಾರಣದಿಂದಾಗಿ​ ಕಳೆದ ಕೆಲ ತಿಂಗಳ ಹಿಂದೆ ಕೆಲಸ ಕಳೆದುಕೊಂಡಿದ್ದ. ಇದೇ ವಿಚಾರವಾಗಿ ಪತಿ – ಪತ್ನಿ ನಡುವೆ ಆಗಾಗ ಕಲಹವೇರ್ಪಡುತ್ತಿತ್ತು ಎನ್ನಲಾಗಿದೆ.

ಭುವನೇಶ್ವರಿ ಹಾಗೂ ಎಂ ಶ್ರೀಕಾಂತ್​ ರೆಡ್ಡಿ ಕಡಪ ಜಿಲ್ಲೆಯ ಬಾಡ್ವೇಲ್​ ನಿವಾಸಿಯಾಗಿದ್ದರು. ಇವರಿಬ್ಬರಿಗೆ 18 ತಿಂಗಳ ಪುತ್ರಿ ಕೂಡ ಇದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...