alex Certify ಕುಡಿಯಲು ಹಣ ಕೊಡದ ಪತ್ನಿ, ಮಗಳಿಗೆ ಬೆಂಕಿ ಇಟ್ಟ ಪಾಪಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿಯಲು ಹಣ ಕೊಡದ ಪತ್ನಿ, ಮಗಳಿಗೆ ಬೆಂಕಿ ಇಟ್ಟ ಪಾಪಿ….!

ನಿದ್ರೆ ಮಾಡುತ್ತಿದ್ದ ಪತ್ನಿ ಹಾಗೂ ದಿವ್ಯಾಂಗ ಪುತ್ರಿಯ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ದಾರುಣ ಘಟನೆ ಆಂಧ್ರ ಪ್ರದೇಶದ ಕಂಡುಕುರ್​ನಲ್ಲಿ ನಡೆದಿದೆ. ಗಾಯಾಳುಗಳನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ದರೂ ಪುತ್ರಿ ಸಾವನ್ನಪ್ಪಿದ್ದಾರೆ ಹಾಗೂ ಪತ್ನಿಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ವಿಚಾರವಾಗಿ ಮಾತನಾಡಿ ಕಂಡುಕುರ್​​ ಗ್ರಾಮೀಣ ವಿಭಾಗದ ಪೊಲೀಸ್​ ಅಧಿಕಾರಿ ಕೆ.ಅಂಕಮ್ಮ ರಾವ್​, ಕೆ.ಶ್ರೀನಿವಾಸ್​ ರೆಡ್ಡಿ ಹಾಗೂ ಸುಶೀಲಾ ದಿನಗೂಲಿ ಕಾರ್ಮಿಕರಾಗಿದ್ದು ಕೂಲಿ ಕೆಲಸದಲ್ಲೇ ಬರುತ್ತಿದ್ದ ಹಣವನ್ನು ನಂಬಿ ಜೀವನ ಸಾಗಿಸುತ್ತಿದ್ದರು. ಈ ದಂಪತಿಗೆ 27 ವರ್ಷದ ಪ್ರಿಯಾಂಕಾ ಎಂಬ ಬುದ್ಧಿಮಾಂದ್ಯ ಪುತ್ರಿ ಕೂಡ ಇದ್ದಾಳೆ. ಕುಡಿತದ ಚಟ ಅಂಟಿಸಿಕೊಂಡಿದ್ದ ಶ್ರೀನಿವಾಸ ರೆಡ್ಡಿ ಇದೇ ವಿಚಾರವಾಗಿ ಪತ್ನಿ ಜೊತೆ ಹಲವು ಬಾರಿ ಜಗಳವಾಡಿದ್ದ. ಅಲ್ಲದೇ ಪತ್ನಿಯ ಶೀಲದ ಬಗ್ಗೆಯೂ ಪದೇ ಪದೇ ಅನುಮಾನ ಪಡುತ್ತಿದ್ದ ಎನ್ನಲಾಗಿದೆ.

ಪತ್ನಿಯ ಬಳಿ ಮದ್ಯಕ್ಕೆ ಬೇಡಿಕೆ ಇಟ್ಟಿದ್ದ ಶ್ರೀನಿವಾಸ್​​ಗೆ ಪತ್ನಿ ಹಣ ಕೊಡಲು ನಿರಾಕರಿಸಿದ್ದೇ ಕೋಪಕ್ಕೆ ಕಾರಣವಾಗಿತ್ತು. ನೇಣಿಗೆ ಶರಣಾಗುತ್ತೇನೆಂದು ಪತ್ನಿಗೆ ಬೆದರಿಕೆಯನ್ನೂ ಒಡ್ಡಿದ್ದ. ಇದಾದ ಬಳಿಕ ಪತ್ನಿ ಹಾಗೂ ಮಗಳು ಮಲಗಿದ್ದ ವೇಳೆ ಅವರ ಮೈ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾನೆ. ಮನೆಯಲ್ಲಿ ಗಲಾಟೆ ಕೇಳುತ್ತಿದ್ದಂತೆಯೇ ನೆರೆ ಮನೆಯವರು ಓಡಿ ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ. ನೆರೆಮನೆಯವರು ಜಮಾಯಿಸುತ್ತಿದ್ದಂತೆಯೇ ಶ್ರೀನಿವಾಸ್​ ರೆಡ್ಡಿ ಪರಾರಿಯಾಗಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...