alex Certify ಕರುನಾಡಿನ ಪ್ರಕೃತಿ ಸೊಬಗು ಬಿಂಬಿಸುವ ಫೋಟೋ ಹಂಚಿಕೊಂಡ ಆನಂದ್ ಮಹೀಂದ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರುನಾಡಿನ ಪ್ರಕೃತಿ ಸೊಬಗು ಬಿಂಬಿಸುವ ಫೋಟೋ ಹಂಚಿಕೊಂಡ ಆನಂದ್ ಮಹೀಂದ್ರ

ಮಹೀಂದ್ರ ಗ್ರೂಪ್ ನ ಅಧ್ಯಕ್ಷ ಆನಂದ್ ಮಹೀಂದ್ರ ಅವರು ಉದ್ಯಮಿಯಾಗಿ ಖ್ಯಾತಿ ಗಳಿಸಿರುವಷ್ಟೇ ಸಾಮಾಜಿಕ ಮಾಧ್ಯಮಗಳ ನೆಚ್ಚಿನ ಬಳಕೆದಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಒಂದೊಂದು ವಿಚಾರವೂ ಅನೇಕರನ್ನು ವಿಸ್ಮಯಗೊಳಿಸುವುದಷ್ಟೇ ಅಲ್ಲ, ಅಲ್ಲೊಂದು ಪ್ರೇರಣಾದಾಯಕ ಅಂಶವಿರುತ್ತದೆ.

ಆನಂದ್ ಮಹೀಂದ್ರ ಅವರಿಗೆ ಪ್ರಕೃತಿಯ ಸೌಂದರ್ಯವೆಂದರೆ ಅಚ್ಚುಮೆಚ್ಚು. ಎಲ್ಲಿಯೇ ಹೋಗಲಿ ಅವರ ಕ್ಯಾಮೆರಾ ಅಲ್ಲೊಂದಿಷ್ಟು ಫೋಟೋ/ವಿಡಿಯೋಗಳನ್ನು ಕ್ಲಿಕ್ಕಿಸಿರುತ್ತದೆ. ಅಂತಹದ್ದೊಂದು ಪ್ರಕೃತಿಯ ಸುಂದರ ಚಿತ್ರವನ್ನು ಆನಂದ್ ಮಹೀಂದ್ರ ಹಂಚಿಕೊಂಡಿದ್ದಾರೆ.

ಅದೂ ಸಹ ಕರ್ನಾಟಕದ ಚಿತ್ರ. ಕುಕ್ಕೆ ಸುಬ್ರಮಣ್ಯದಿಂದ ಗುಂಡ್ಯ ನಡುವಿನ ರಸ್ತೆಯ ಇಕ್ಕೆಲಗಳಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ ಚಿತ್ರ ಇದಾಗಿದೆ.
ಈ ಸೌಂದರ್ಯ ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿದೆ. ಇಲ್ಲಿನ ಪ್ರಕೃತಿ ಮನಮೋಹಕವಾಗಿದೆ ಎಂದಿದ್ದಾರೆ ಆನಂದ್ ಮಹೀಂದ್ರ.

ಈ ಪೋಸ್ಟ್ ಅನ್ನು ನೋಡಿದ ನೆಟ್ಟಿಗರು, ಇದೊಂದು ಸ್ವರ್ಗದಂತಿದೆ. ಇದೇ ಮಾರ್ಗದಲ್ಲಿ ನಾವೂ ಪ್ರಯಾಣ ಮಾಡಬೇಕೆಂದಿದ್ದೇವೆ ಎಂದಿದ್ದಾರೆ. ಇನ್ನೂ ಕೆಲವರು, ಈ ಕಣ್ಮನ ಸೆಳೆಯುವ ಪ್ರಕೃತಿಯ ಸೊಬಗಿನ ನಡುವೆ ಸೈಕಲ್ ರೈಡ್ ಮಾಡಬೇಕೆಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...